ADVERTISEMENT

ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 16 ಮೇ 2018, 10:00 IST
Last Updated 16 ಮೇ 2018, 10:00 IST

ಶಕ್ತಿನಗರ: ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ದದ್ದಲ ಬಸನಗೌಡ ಅವರು ಗೆಲುವು ಸಾಧಿಸಿ
ದ್ದರಿಂದ ಮಂಗಳವಾರ ದೇವಸೂಗೂರು ಗ್ರಾಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಶಕ್ತಿನಗರ ಮಾರ್ಗವಾಗಿ ಬಂದ ಕಾರ್ಯಕರ್ತರು ಸೂಗೂರೇಶ್ವರ ದೇವಸ್ಥಾನದ ವೃತ್ತದಲ್ಲಿ ಬಣ್ಣ ಎರೆಚಿ
ಸಂಭ್ರಮಿಸಿದರು. ಸೂಗೂರೇಶ್ವರ ಮತ್ತು ಮಾತಾ ನಾಗರ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಮುಖಂಡರಾದ ಸಿದ್ದಪ್ಪಗೌಡ, ಸಾಂಬಶಿವ, ಹಂಪನಗೌಡ, ರಂಗನಗೌಡ, ಮಹಮದ್‌ಗೌಸ್‌, ಬಸಪ್ಪ, ಮಹಮದ್ ನಬೀ, ಸುರೇಶ ಮಡಿವಾಳ, ಸೂಗಪ್ಪವಗ್ಗರ್, ರಮೇಶ, ಮಾರುತಿ, ಕಸ್ತೂರಯ್ಯ ಸ್ವಾಮಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.