ADVERTISEMENT

ರಾಯಚೂರು: ಕಾಡಿಗೆ ಮರಳಿದ 67 ಹಾವುಗಳು

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 13:54 IST
Last Updated 3 ಜುಲೈ 2021, 13:54 IST
ಉರಗ ನಿಪುಣ ಅಪ್ಸರ್‌ ಹುಸೇನ್‌ ಅವರು 67 ಹಾವುಗಳನ್ನು ರಾಯಚೂರಿನ ಮಲಯಾಬಾದ್‌ ಕಾಡಿಗೆ ಮರಳಿಸಿದರು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ದದ್ದಲ ಮತ್ತಿತರರು ಇದ್ದರು
ಉರಗ ನಿಪುಣ ಅಪ್ಸರ್‌ ಹುಸೇನ್‌ ಅವರು 67 ಹಾವುಗಳನ್ನು ರಾಯಚೂರಿನ ಮಲಯಾಬಾದ್‌ ಕಾಡಿಗೆ ಮರಳಿಸಿದರು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ದದ್ದಲ ಮತ್ತಿತರರು ಇದ್ದರು   

ರಾಯಚೂರು: ನಗರದ ಉರಗ ನಿಪುಣ ಅಪ್ಸರ್‌ ಹುಸೇನ್‌ ಅವರು ವಿವಿಧೆಡೆ ಜನವಸತಿಗಳಲ್ಲಿ ಸೆರೆಹಿಡಿದಿದ್ದ 67 ಹಾವುಗಳನ್ನು ಶುಕ್ರವಾರ ಮಲಿಯಾಬಾದ್‌ ಕಾಡಿಗೆಮರಳಿಸಿದರು.

ಹಾವುಗಳ ಕುರಿತಾಗಿ ಅರಿವು ಮೂಡಿಸುವ ಕಿರು ಕಾರ್ಯಕ್ರಮವೂ ಇದೇ ವೇಳೆ ನಡೆಯಿತು. ಶಾಸಕ ಬಸನಗೌಡ ದದ್ದಲ, ಎಪಿಎಂಸಿ ಮಾಜಿ ಅಧ್ಯಕ್ಷ ಬಸನಗೌಡ ತುರಕುನದಿನ್ನಿ, ಆನಂದ ಲೋಧಾ, ಅರಣ್ಯ ಅಧಿಕಾರಿ ರಾಜೇಶ ಇದ್ದರು.

ಫ್ರೆಂಡ್ಸ್‌ ವೈಲ್ಡ್‌ ಲೈಫ್‌ ಸೊಸೈಟಿ ಅಧ್ಯಕ್ಷರಾದ ಅಪ್ಸರ್‌ ಹುಸೇನ್‌ ಅವರು 31 ವರ್ಷಗಳಿಂದ ಹಾವುಗಳ ಕುರಿತು ಅಧ್ಯಯನ ಮಾಡುತ್ತಾ ಬಂದಿದ್ದಾರೆ. ಅವುಗಳನ್ನು ರಕ್ಷಿಸಿ, ಕಾಡಿಗೆ ಬಿಡುವುದರ ಜೊತೆಗೆ ಹಾವುಗಳ ಮಹತ್ವ ಮತ್ತು ಜನರಲ್ಲಿರುವ ಭಯ ನಿವಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ವಿಡಿಯೋಗ್ರಾಫರ್‌ ರಹೀಂ, ಉರಗ ಸಂರಕ್ಷಕರಾದ ಸೋಹೆಲ್‌, ಆಶರ್‌ ಹುಸೇನ್‌, ಉದಯ, ಮುಕ್ತಿಯಾರ್‌, ಖಾಜಾ, ಆಶೀಪ್‌ ಇದ್ದರು. ಜನವಸತಿಗಳಲ್ಲಿ ಹಾವು ಕಂಡುಬಂದರೆ 9900127861 ಸಂಖ್ಯೆಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.