ರಾಯಚೂರಿನ ಮಹಾತ್ಮಗಾಂಧಿ ಕ್ರೀಡಾಂಗಣದ ಬಳಿ ನಡೆಯುತ್ತಿರುವ ಏಮ್ಸ್ ಹೋರಾಟ ಸಮಿತಿಯ ಧರಣಿ ಮಂಗಳವಾರ 1090 ದಿನ ಪೂರೈಸಿತು.
ರಾಯಚೂರು: ಜಿಲ್ಲಾ ಏಮ್ಸ್ ಹೋರಾಟ ಸಮಿತಿ ವತಿಯಿಂದ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮಂಗಳವಾರ 1090 ದಿನ ಪೂರೈಸಿತು.
ಹಿಂದುಳಿದ, ರೋಗಗ್ರಸ್ತ, ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಧರಣಿಯಲ್ಲಿ ಡಾ. ಬಸವರಾಜ್ ಕಳಸ, ಆರಿಫ್ ಮಿಯಾ ನೆಲಹಾಳ, ಎಸ್. ತಿಮ್ಮಾರೆಡ್ಡಿ, ಡಾ. ಜಗದೀಶ್ ಪೂರತಿಪ್ಪಲಿ, ವೆಂಕಟರೆಡ್ಡಿ ದಿನ್ನಿ, ಜೈ ಭೀಮ್, ವೆಂಕಟಯ್ಯ ಶೆಟ್ಟಿ ಹೊಸಪೇಟೆ, ಅಜೀಜ್, ಮಹೇಂದ್ರ ಸಿಂಗ್, ವೀರಭದ್ರಯ್ಯ ಸ್ವಾಮಿ , ಬಸವರಾಜ ಮಿಮಿಕ್ರಿ, ದೇವೇಂದ್ರಪ್ಪ ಧನ್ವಂತರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.