ADVERTISEMENT

ಬುದ್ಧಿಮಾಂದ್ಯ ಮಗಳೊಂದಿಗೆ ಶಿಕ್ಷಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 2:18 IST
Last Updated 8 ಡಿಸೆಂಬರ್ 2019, 2:18 IST
ರಾಯಚೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶಿಕ್ಷಣ ಇಲಾಖೆಯು ಕಾನೂನು ಬಾಹಿರ ವರ್ಗಾವಣೆಯ ಕ್ರಮವನ್ನು ಖಂಡಿಸಿ ಶಿಕ್ಷಕಿ ಜೆ.ಶಾಂತಲಕ್ಷ್ಮಿ ತನ್ನ ಬುದ್ಧಿಮಾಂದ್ಯ ಮಗಳೊಂದಿಗೆ ಶನಿವಾರ ಪ್ರತಿಭಟನೆ ನಡೆಸಿದರು
ರಾಯಚೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶಿಕ್ಷಣ ಇಲಾಖೆಯು ಕಾನೂನು ಬಾಹಿರ ವರ್ಗಾವಣೆಯ ಕ್ರಮವನ್ನು ಖಂಡಿಸಿ ಶಿಕ್ಷಕಿ ಜೆ.ಶಾಂತಲಕ್ಷ್ಮಿ ತನ್ನ ಬುದ್ಧಿಮಾಂದ್ಯ ಮಗಳೊಂದಿಗೆ ಶನಿವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಶಿಕ್ಷಣ ಇಲಾಖೆಯು ಕಾನೂನುಬಾಹಿರ ವರ್ಗಾವಣೆ ಮಾಡಿರುವ ಕ್ರಮವನ್ನು ವಿರೋಧಿಸಿ ಶಿಕ್ಷಕಿ ಜೆ.ಶಾಂತಲಕ್ಷ್ಮಿ ಅವರು ತಮ್ಮ ಬುದ್ಧಿಮಾಂದ್ಯ ಮಗಳೊಂದಿಗೆ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ವರ್ಗಾವಣೆ ಆಗಲು ಕನಿಷ್ಠ 10 ವರ್ಷ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿರಬೇಕು ಎಂಬ ನಿಯಮವಾಗಿದೆ. ಆದರೆ, 10 ವರ್ಷ ಸೇವೆ ಪೂರ್ಣಗೊಳ್ಳುವ ಮುನ್ನವೇ ವರ್ಗಾವಣೆಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅರ್ಜಿ ಸಲ್ಲಿಸದಿದ್ದರೂ ವರ್ಗಾವಣೆ ಮಾಡಿದ್ದು, ಇದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಅವರು ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಏಳು ವರ್ಷ ಹಿಂದೆ ರಾಯಚೂರು ತಾಲ್ಲೂಕಿನ ಕಸ್ಬೆ ಕ್ಯಾಂಪ್‌ನ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಪತಿ ನಿಧನರಾದ ಬಳಿಕ ವಿಲಕಚೇತನ ಮಗಳ ಆರೈಕೆ ಜವಾಬ್ದಾರಿ ಇದೆ. ರಾಯಚೂರು ನಗರದ ಜಹೀರಾಬಾದ್‌ ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದೆ. ಆದರೆ, ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ತಪ್ಪಿನಿಂದಾಗಿ ಪುನಃ ತಾಲ್ಲೂಕಿನ ಮಟಮಾರಿ ಶಾಲೆಗೆ ವರ್ಗಾವಣೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಬುದ್ಧಿಮಾಂದ್ಯ ಮಗಳ ಪಾಲನೆ ಮತ್ತು ಪೋಷಣೆ ಮಾಡಿ ಶಾಲೆಗೆ ಹೋಗುವಷ್ಟರಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ಸ್ಥಳೀಯ ಶಾಲೆಯಾದರೆ ಅನುಕೂಲವಾಗುತ್ತದೆ. ವರ್ಗಾವಣೆ ರದ್ದುಗೊಳಿಸಿ ಹಿಂದಿನಂತೆ ಜಹಿರಾಬಾದ್ ಶಾಲೆಯಲ್ಲೇ ಮುಂದುವರಿಸಬೇಕು ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.