ADVERTISEMENT

ಬಾಲವಾಡ: ಬಸವ ಪಂಚಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 14:50 IST
Last Updated 13 ಆಗಸ್ಟ್ 2021, 14:50 IST
ಕವಿತಾಳ ಸಮೀಪದ ಬಾಗಲವಾಡದಲ್ಲಿ ನಾಗರ ಪಂಚಮಿ ನಿಮಿತ್ತ ಮಕ್ಕಳಿಗೆ ಶುಕ್ರವಾರ ಹಾಲು ಹಣ್ಣು ವಿತರಿಸಲಾಯಿತು
ಕವಿತಾಳ ಸಮೀಪದ ಬಾಗಲವಾಡದಲ್ಲಿ ನಾಗರ ಪಂಚಮಿ ನಿಮಿತ್ತ ಮಕ್ಕಳಿಗೆ ಶುಕ್ರವಾರ ಹಾಲು ಹಣ್ಣು ವಿತರಿಸಲಾಯಿತು   

ಬಾಗಲವಾಡ (ಕವಿತಾಳ): ‘ನಾಗರಕಲ್ಲಿಗೆ ಹಾಲನೆರೆಯುವ ಬದಲಿಗೆ ಹಸಿದ ಮಕ್ಕಳಿಗೆ ಹಾಲು ನೀಡುವ ಮೂಲಕ ನಾಗರ ಪಂಚಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ’ ಎಂದು ಪ್ರಬುದ್ಧ ಚಾರಿಟಬಲ್‍ ಟ್ರಸ್ಟ್‌ನ ಅಧ್ಯಕ್ಷ ಗಂಗಾಧರ ಬಾಗಲವಾಡ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ ) ತಾಲ್ಲೂಕು ಘಟಕ ಮತ್ತು ಪ್ರಬುದ್ಧ ಚಾರಿಟಬಲ್‍ ಟ್ರಸ್ಟ್‍ ವತಿಯಿಂದ ಸಿರವಾರ ತಾಲ್ಲೂಕಿನ ಬಾಗಲವಾಡ ಗ್ರಾಮದ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಗರ ಪಂಚಮಿ ಬದಲಿಗೆ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕ ಮಲ್ಲಿಕಾರ್ಜುನ, ಟ್ರಸ್ಟ್‌ನ ಉಪಾಧ್ಯಕ್ಷ ಮೌನೇಶ ಕೋರಿ ಮತ್ತಿತರರು ಮಾತನಾಡಿದರು.

ADVERTISEMENT

ಮಕ್ಕಳಿಗೆ ಹಾಲು, ಬಾಳೆಹಣ್ಣು ಮತ್ತು ಬ್ರೆಡ್‍ ವಿತರಿಸಲಾಯಿತು

ಟ್ರಸ್ಟ್‌ನ ಪದಾಧಿಕಾರಿಗಳಾದ ನಾಗರಾಜ ಹಿಂದಿನಮನಿ, ಜಗದೀಶ್‍ ಸಾಲಮನಿ, ವಿಶ್ವನಾಥ ಸಾಲಮನಿ, ಹುಚ್ಚರೆಡ್ಡಿ ಭವಾನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಬಸವರಾಜ, ಮುಖ್ಯ ಶಿಕ್ಷಕ ಹನುಮಂತಪ್ಪ ನಾಯ್ಕರ್, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಮುಖಂಡರಾದ ಮಲ್ಲನಗೌಡ ಪಾಟೀಲ್‍, ಯಂಕೋಬ ನಾಯಕ, ನಾಗರಾಜಪ್ಪ ಧಣಿ, ಭೀರಪ್ಪ ಸಾಹುಕಾರ, ಅಮರೇಶ ನಾಯಕ, ಗುರಪ್ಪ ಸಾಹುಕಾರ, ಅಮರೇಶ ದೇಸಾಯಿ, ಚಂದ್ರು ಕಾವಲಿ, ಅಮರೇಶ ಛಲವಾದಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.