ADVERTISEMENT

ಬೇಡ ಜಂಗಮ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 13:07 IST
Last Updated 1 ಏಪ್ರಿಲ್ 2022, 13:07 IST
ಕವಿತಾಳದಲ್ಲಿ ಬೇಡ ಜಂಗಮ ಜ್ಯೋತಿ ರಥಕ್ಕೆ ಸಮಾಜದ ಮುಖಂಡರು ಶುಕ್ರವಾರ ಸ್ವಾಗತ ಕೋರಿದರು
ಕವಿತಾಳದಲ್ಲಿ ಬೇಡ ಜಂಗಮ ಜ್ಯೋತಿ ರಥಕ್ಕೆ ಸಮಾಜದ ಮುಖಂಡರು ಶುಕ್ರವಾರ ಸ್ವಾಗತ ಕೋರಿದರು   

ಕವಿತಾಳ: ಪಟ್ಟಣ ಮತ್ತು ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಧರ್ಮ ಜಾಗೃತಿಗಾಗಿ ಆಗಮಿಸಿದ ಬೇಡ ಜಂಗಮ ಜ್ಯೋತಿ ರಥಕ್ಕೆ ವೀರಶೈವ ಸಮಾಜ ಮತ್ತು ಬೇಡ ಜಂಗಮ ಸಮಾಜದ ವತಿಯಿಂದ ಶುಕ್ರವಾರ ಅದ್ದೂರಿ ಸ್ವಾಗತ ಕೋರಲಾಯಿತು.

ಇಲ್ಲಿನ ಮಸ್ಕಿ ಕ್ರಾಸ್‍ ನಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಹೊಸ ಬಸ್‍ ನಿಲ್ದಾಣದ ವರೆಗೆ ಮೆರವಣಿಗೆ ಮಾಡಲಾಯಿತು.

ವೀರಶೈವ ಸಮಾಜದ ಹೋಬಳಿ ಘಟಕದ ಅಧ್ಯಕ್ಷ ಮೋರೆಪ್ಪ ಹೂಗಾರ, ಮುಖಂಡರಾದ ಭೀಮನಗೌಡ ವಂದ್ಲಿ, ಶೇಖರಪ್ಪ ಸಾಹುಕಾರ ಹಟ್ಟಿ, ಸುಭಾಶ್ಚಂದ್ರ ಚಕೋಟಿ, ಸೂಗಪ್ಪ ಸಾಹುಕಾರ ಭಾವಿಕಟ್ಟಿ, ಶರಣು ಭೂಪಾಲ ಭಾವಿಕಟ್ಟಿ, ವೀರಭದ್ರಪ್ಪ ಅಚ್ಚಪ್ಪ, ವೀರಯ್ಯ ಸ್ವಾಮಿ, ಶಾಂತಕುಮಾರ, ಡಾ.ಅಲ್ಲಮಪ್ರಭು, ಕರಿಬಸಯ್ಯ ನಂದಿಕೋಮಠ ಗುರುಬಸಯ್ಯ, ವಿಜಯರಾಜ, ಗುಂಡಯ್ಯ, ಚನ್ನಯ್ಯ ಹಿರೇಮಠ, ನಾಗರಾಜ ಹೂಗಾರ, ಗುರುಪಾದಯ್ಯ, ಎಸ್‍.ಪಿ.ಸಿದ್ದಯ್ಯಸ್ವಾಮಿ, ಗಂಗಾಧರಯ್ಯ, ವಿರೇಶ ಹೂಗಾರ, ಶಿವಕುಮಾರ ಸಾಹುಕಾರ, ಸಂತೋಷ ರಾಜಗುರು, ಶಶಿಧರ ಜಂಗಮರಹಳ್ಳಿ, ಶರಣಬಸವ, ಡಾ.ಕುಮಾರಸ್ವಾಮಿ, ಮಲ್ಲೇಶಪ್ಪ ಬಳೆ, ಮಲ್ಲಿಕಾರ್ಜುನ ಮತ್ತು ಮಹಾದೇವ ಹಡಪದ ಮತ್ತಿತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.