ADVERTISEMENT

ರಾಯಚೂರು: ಕೃಷ್ಣಾ ಪ್ರವಾಹದಲ್ಲಿ ಕೊಚ್ಚಿಹೋದ ಬಾಲಕ, ತೀವ್ರ ಶೋಧ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 4:00 IST
Last Updated 22 ಅಕ್ಟೋಬರ್ 2019, 4:00 IST
   

ರಾಯಚೂರು: ಕೃಷ್ಣಾನದಿತೀರದಲ್ಲಿ ದನ ಮೇಯಿಸುವಾಗ ದಿಢೀರ್ ಬಂದ ಪ್ರವಾಹದಲ್ಲಿ ಸೋಮವಾರ ಕೊಚ್ಚಿಹೋಗಿರುವ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಚಿಂಚೋಡಿ ಗ್ರಾಮದ ಸಂತೋಷ ದೇವೇಗೌಡ (16) ಎಂಬ ಬಾಲಕನ ಶೋಧ ಮುಂದುವರಿದಿದೆ.

ತಿಂಥಣಿ ಸೇತುವೆಯಿಂದ ಅರ್ಧ ಕಿಲೋ ಮೀಟರ್ ಮುಂದೆ ಚಿಂಚೋಡಿ ಗ್ರಾಮವಿದೆ. ಅಗ್ನಿಶಾಮಕ ದಳದವರು ಮತ್ತು ಪೊಲೀಸರು ನದಿತೀರಗಳಲ್ಲಿ ಹುಡುಕಾಟ ಮಾಡುತ್ತಿದ್ದಾರೆ. ನದಿ ಪ್ರವಾಹ ಏರುಗತಿಯಲ್ಲಿದ್ದು ಬಾಲಕನ ಮೃತದೇಹ ಪತ್ತೆ ಸವಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT