ADVERTISEMENT

ರಾಯಚೂರು: ಲಾಠಿ ಪ್ರಯೋಗ ಆರಂಭಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 10 ಮೇ 2021, 6:05 IST
Last Updated 10 ಮೇ 2021, 6:05 IST
   

ರಾಯಚೂರು: ಲಾಕ್‌ಡೌನ್ ಬಿಗಿಯಾಗಿ ಜಾರಿಗೊಳಿಸಲು ಮುಂದಾಗಿರುವ ಪೊಲೀಸರು 10 ಗಂಟೆ ಮುಗಿಯುತ್ತಿದ್ದಂತೆಅನಗತ್ಯವಾಗಿ ಸಂಚರಿಸುವವರ ಮೇಲೆ ಲಾಠಿ ಪ್ರಯೋಗ ಆರಂಭಿಸಿದ್ದಾರೆ.

ಮಳಿಗೆಗಳ ಎದುರು ನಿಂತುಕೊಂಡಿದ್ದ ಜನರು ಪೊಲೀಸರ ವಿಜಿಲ್ ಸದ್ದು ಕೇಳಿ ಚದುರಿಕೊಂಡು ಮನೆಯತ್ತ ಓಟ ಆರಂಭಿಸಿದ್ದಾರೆ. ಕೈಗೆ ಸಿಕ್ಕವರನ್ನು ವಿಚಾರಿಸಿ ಬೈಕ್ ವಶಕ್ಕೆ ಪಡೆಯುತ್ತಿದ್ದು, ದಂಡ ವಿಧಿಸುತ್ತಿದ್ದಾರೆ.

ರಾಯಚೂರು ನಗರದ ತಿನ್ ಕಂದಿಲ್ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಗಂಜ್ ವೃತ್ತ, ಬಸವೇಶ್ವರ ವೃತ್ತ ಹಾಗೂ ಸ್ಟೇಷನ್ ವೃತ್ತ ಸೇರಿದಂತೆ ವಿವಿಧೆಡೆ ಪೊಲೀಸರು ಬ್ಯಾರಿಕೇಡ್ ಹಾಕಿ, ಪರಿಶೀಲನೆ ಮಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.