ADVERTISEMENT

ಮುದಗಲ್: ಗ್ರಾಮ ಪಂಚಾಯಿತಿಗೆ ಕೇಂದ್ರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 13:59 IST
Last Updated 22 ಜುಲೈ 2024, 13:59 IST
ಮುದಗಲ್ ಸಮೀಪದ ತೊಡಕ್ಕಿ ಗ್ರಾಮದ ಶಾಲೆ ಆವರಣದಲ್ಲಿ ಕೇಂದ್ರ ತಂಡ ಸಸಿ ನೆಟ್ಟಿತು
ಮುದಗಲ್ ಸಮೀಪದ ತೊಡಕ್ಕಿ ಗ್ರಾಮದ ಶಾಲೆ ಆವರಣದಲ್ಲಿ ಕೇಂದ್ರ ತಂಡ ಸಸಿ ನೆಟ್ಟಿತು   

ಮುದಗಲ್: ಸಮೀಪದ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಲಾಪುರ ಹಾಗೂ ತೊಡಕ್ಕಿ ಗ್ರಾಮಕ್ಕೆ ದೆಹಲಿಯ ವಿ.ಡಬ್ಲ್ಯೂ.ಎಸ್.ಸಿ ಸಮಿತಿಯ ಎಸ್.ಎಚ್.ಜಿ.ಎನ್.ಆರ್.ಎಲ್.ಎಂ ಕೇಂದ್ರ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನಾಗಲಾಪುರ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆ ಕುಡಿಯುವ ನೀರಿನ ಪರೀಕ್ಷೆ, ಶಾಲಾ ಶೌಚಾಲಯ, ಗ್ರಾಮಗಳ ಸ್ವಚ್ಛತೆ, ಕಸದ ವಿಲೇವಾರಿ ವಾಹನ ಬಳಕೆ, ವೈಯಕ್ತಿಕ ಶೌಚಾಲಯದ ಉಪಯೋಗದ ಕುರಿತು ಪರಿಶೀಲಿಸಿತು. ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಂತರ ತೊಡಕ್ಕಿ ಗ್ರಾಮಕ್ಕೆ ಭೇಟಿ ನೀಡಿ ಶಾಲಾ ಆವರಣ ಪರಿಶೀಲಿಸಿ, ಆವರಣದಲ್ಲಿ ಸಸಿ ನೆಡಲಾಯಿತು.

ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಪ್ರಕಾಶ ವಡ್ಡರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಾದ ಬೊಮ್ಮಗೊಂಡ, ವಿನೋದ ಕುಮಾರ, ಲಿಂಗನಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಘಪ್ಪ ರಾಠೋಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜ್ಯೋತಿಬಾಯಿ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಹಿರೇಮನಿ, ಆಶಾ ಕಾರ್ಯಕರ್ತೆ ಸರಸ್ವತಿ ಸೇರಿ ಹಲವರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.