ರಾಯಚೂರು: ಕೋವಿಡ್ ದೃಢವಾಗಿದ್ದರಿಂಧ ಹೈದರಾಬಾದ್ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಜಿಲ್ಲೆಯ ಮಾನ್ವಿ ತಾಲ್ಲೂಕು ಉಪನೋಂದಣಾಧಿಕಾರಿ ಶಕೀಲ್ ಅಹ್ಮದ್ (45) ಮೃತಪಟ್ಟಿದ್ದು, ಪುತ್ರನ ಮರಣದ ಸುದ್ದಿ ತಿಳಿಯುತ್ತಿದ್ದಂತೆ ರಾಯಚೂರಿನ ಹಾಜಿ ಕಾಲೋನಿಯಲ್ಲಿದ್ದ ತಾಯಿ ರಜೀಯಾ ಸುಲ್ತಾನ (65) ಕೂಡಾ ಮೃತಪಟ್ಟ ಮನಕಲಕುವ ಘಟನೆ ಶನಿವಾರ ನಡೆದಿದೆ.
ಇನ್ನೊಬ್ಬ ಸಹೋದರ ಬೆಂಗಳೂರಿನಲ್ಲಿ ಉಪನೋಂದಣಾಧಿಕಾರಿಯಾಗಿದ್ದು, ಕೋವಿಡ್ ದೃಢಪಟ್ಟಿದ್ದರಿಂದ ಚಿಕಿತ್ಸೆಗಾಗಿ ಹೈದರಾಬಾದ್ನಲ್ಲಿಯೇ ದಾಖಲಾಗಿದ್ದಾರೆ.
ಸಿರವಾರ ತಾಲ್ಲೂಕು ಕಲ್ಲೂರು ಗ್ರಾಮದ ಈ ಕುಟುಂಬವು ರಾಯಚೂರಿನಲ್ಲಿ ವಾಸಿಸುತ್ತಿತ್ತು. ಜುಲೈ 24 ರಂದು ಶಕೀಲ್ ಅವರಿಗೆ ಕೋವಿಡ್ ದೃಢವಾಗಿತ್ತು. ಆರಂಭದಲ್ಲಿ ಒಪೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಉಸಿರಾಟ ಸಮಸ್ಯೆ ತೀವ್ರವಾಗಿದ್ದರಿಂದ ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.