ADVERTISEMENT

ಛತ್ತರ ಆಂಜನೇಯ ಸ್ವಾಮಿ ಜಾತ್ರೆ ರದ್ದು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 11:05 IST
Last Updated 20 ಏಪ್ರಿಲ್ 2021, 11:05 IST
ಮುದಗಲ್ ಸಮೀಪದ ಛತ್ತರ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಭೆ ನಡೆಯಿತು
ಮುದಗಲ್ ಸಮೀಪದ ಛತ್ತರ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಭೆ ನಡೆಯಿತು   

ಛತ್ತರ (ಮುದಗಲ್): ‘ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಛತ್ತರ ಗ್ರಾಮದ ಆಂಜನೇಯ ಸ್ವಾಮಿ ಜಾತ್ರೆ ರದ್ದು ಪಡಿಸಲಾಗಿದೆ’ ಎಂದು ನಾಗಲಾಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ ತಿಳಿಸಿದರು.

ಛತ್ತರ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಛತ್ತರ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಸಹಕರಿಸಬೇಕು ಎಂದರು.

ADVERTISEMENT

ನಾಗಲಾಪೂರ ಗ್ರಾಮಲೆಕ್ಕಾಧಿಕಾರಿ ಬಸವರಾಜ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಿಂದಾಬಾಯಿ ಕೃಷ್ಣ ರಾಠೋಡ, ಭೋಗೇಶರಾವ್, ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ ರಾಠೋಡ , ಹನುಮೇಶ ನಾಯಕ, ಸಿದ್ದನಗೌಡ, ಶಿವರಾಜ ಪಾಟೀಲ, ವೆಂಕಟೇಶ ಪೂಜಾರಿ, ಆಂಜನೇಯ ಬೇರಗಿ, ಭೀಮನಗೌಡ ದಶರತ ಪೂಜಾರಿ, ಅಯ್ಯಪ್ಪ, ಸೋಮು ಕನ್ನಾಳ ಹಾಗೂ ನಿರುಪಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.