ರಾಯಚೂರು: ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಸಮೀಪದ ಯಲಗಟ್ಟಾ ಗ್ರಾಮದಲ್ಲಿ ಹುಚ್ಚು ಹತ್ತಿದ್ದ 30 ಬೀದಿನಾಯಿಗಳನ್ನು ಗ್ರಾಮಸ್ಥರು ಭಾನುವಾರ ಸಾಯಿಸಿರುವುದು ಈಗ ಬೆಳಕಿಗೆ ಬಂದಿದೆ.
ಹುಚ್ಚು ಹತ್ತಿದ್ದ ಬೀದಿನಾಯಿಗಳು ರಾತ್ರಿಯಿಡೀ ಕಚ್ಚಾಡುತ್ತಿದ್ದವು ಹಾಗೂ ಬೊಗಳುವ ಕರ್ಕಶ ಧ್ವನಿಯಿಂದ ಜನರು ರೋಸಿಹೋಗಿ ಸಾಯಿಸಿದ್ದಾರೆ ಎಂದು ತಿಳಿಸಲಾಗಿದೆ.
ಗ್ರಾಮದಲ್ಲಿ ಎರಡು ಎತ್ತುಗಳನ್ನು ಬೀದಿಬಾಯಿಗಳು ಕಚ್ಚಿ ಸಾಯಿಸಿದ್ದು, ಇದರಿಂದ ರೊಚ್ಚಿಗೆದ್ದ ಜನರು ನಾಯಿಗಳನ್ನು ಕೊಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.