ADVERTISEMENT

ಹಾವು ಕಚ್ಚಿ ರೈತ ಸಾವು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 13:56 IST
Last Updated 19 ಸೆಪ್ಟೆಂಬರ್ 2020, 13:56 IST
ಅಮರಪ್ಪ ನಾಯಕ
ಅಮರಪ್ಪ ನಾಯಕ   

ಸಿಂಧನೂರು: ತಾಲ್ಲೂಕಿನ ಹೊಗರನಾಳ ಗ್ರಾಮದಲ್ಲಿ ರೈತರೊಬ್ಬರು ಹಾವು ಕಚ್ಚಿ ಮೃತಪಟ್ಟಿದ್ದಾರೆ.

ಅಮರಪ್ಪ ಪಾಮಯ್ಯ ನಾಯಕ (52) ಮೃತರು.

ಹೊಲದಲ್ಲಿರುವ ಗುರೆಳ್ಳು ರಾಶಿಗೆ ರಾತ್ರಿ ತಾಡಪಾಲ್‌ ಮುಚ್ಚುತ್ತಿದ್ದಾಗ ಹಾವು ಕಚ್ಚಿದೆ. ಬಳಿಕ ರೈತರನ್ನು ಸಿಂಧನೂರಿನ ಆಸ್ಪತ್ರೆಗೆ ಕರೆ ತರಲಾಗಿದೆ. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ADVERTISEMENT

ಮೃತ ರೈತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಶಿವನಗೌಡ ಗೊರೇಬಾಳ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.