ADVERTISEMENT

ಶಕ್ತಿನಗರ: ಕಾಣೆಯಾದವರ ಮಾಹಿತಿ ಸಂಗ್ರಹ, ಶೋಧ ತೀವ್ರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 4:28 IST
Last Updated 18 ಆಗಸ್ಟ್ 2020, 4:28 IST
ತೆಪ್ಪ ಮುಳುಗಿ ನಾಪತ್ತೆಯಾದ ನಾಲ್ವರಿಗಾಗಿ ಮಂಗಳವಾರ ನಸುಕಿನ ಜಾವ  5 ರಿಂದ ಶೋಧ ಕಾರ್ಯ ಆರಂಭವಾಗಿದೆ. 
ತೆಪ್ಪ ಮುಳುಗಿ ನಾಪತ್ತೆಯಾದ ನಾಲ್ವರಿಗಾಗಿ ಮಂಗಳವಾರ ನಸುಕಿನ ಜಾವ  5 ರಿಂದ ಶೋಧ ಕಾರ್ಯ ಆರಂಭವಾಗಿದೆ.    
""

ಶಕ್ತಿನಗರ: ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಪತ್ತೆಯಾದ ನಾಲ್ವರಿಗಾಗಿ ಮಂಗಳವಾರ ನಸುಕಿನ ಜಾವ 5 ರಿಂದ ಶೋಧ ಕಾರ್ಯ ಆರಂಭವಾಗಿದೆ.

ರಾಯಚೂರು ತಹಶಿಲ್ದಾರ್ ಡಾ‌. ಹಂಪಣ್ಣ ಸಜ್ಜನ್, ಸಿಪಿಐ ಅಂಬರಾಯ್ ಕಮಾನಮೆನಿನ್, ಶಕ್ತಿ ನಗರ ಠಾಣೆ ಪಿಎಸ್ಐ ಎಚ್. ಹುಲಿಗೇಶ ಓಂಕಾರ, ಗ್ರಾಮಲೆಕ್ಕಾಧಿಕಾರಿ ಸುರೇಶ ಮತ್ತು ತೆಲಂಗಾಣದ ಮಖ್ತಲ್ ತಹಶಿಲ್ದಾರ್ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.

ಸೋಮವಾರ ರಾತ್ರಿ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ, ಉಪ ವಿಭಾಗಧಿಕಾರಿ ಸಂತೋಷಕಾಮಗೌಡ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಪ್ರಕಾಶ ನಿಕ್ಕಂ ಅವರು ಸ್ಥಳಕ್ಕೆ ಭೇಟಿ ನೀಡಿ ಮಖ್ತಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.