ADVERTISEMENT

ದೇವದುರ್ಗ | ಮರಳು ಅಕ್ರಮ ದಾಸ್ತಾನು: ಜಪ್ತಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 15:46 IST
Last Updated 30 ಜೂನ್ 2025, 15:46 IST
ದೇವದುರ್ಗ ತಾಲ್ಲೂಕಿನ ಅಪ್ರಾಳ-ಮದರಕಲ್ ರಸ್ತೆ ಬಳಿ ಅಕ್ರಮವಾಗಿ ದಾಸ್ತಾನು ಮಾಡಿದ ಮರಳು ಜ‍ಪ್ತಿ ಮಾಡಿದ ಅಧಿಕಾರಿಗಳು
ದೇವದುರ್ಗ ತಾಲ್ಲೂಕಿನ ಅಪ್ರಾಳ-ಮದರಕಲ್ ರಸ್ತೆ ಬಳಿ ಅಕ್ರಮವಾಗಿ ದಾಸ್ತಾನು ಮಾಡಿದ ಮರಳು ಜ‍ಪ್ತಿ ಮಾಡಿದ ಅಧಿಕಾರಿಗಳು   

ದೇವದುರ್ಗ: ತಾಲ್ಲೂಕಿನ ಅಪ್ರಾಳ-ಮದರಕಲ್ ರಸ್ತೆ ಬಳಿಯ ಹಳ್ಳದ ಹತ್ತಿರ ಅಕ್ರಮವಾಗಿ ದಾಸ್ತಾನು ಮಾಡಿದ ₹1.80 ಲಕ್ಷ ಮೌಲ್ಯದ 300 ಮೆಟ್ರಿಕ್ ಟನ್ ಮರಳನ್ನು ಅಧಿಕಾರಿಗಳು ಭಾನುವಾರ ಜಪ್ತಿ ಮಾಡಿದ್ದಾರೆ.

ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮತ್ತು ಗಬ್ಬೂರು ಠಾಣೆ ಪಿಎಸ್ಐ ಗಂಗಪ್ಪ ಬುರ್ಲಿ ದಾಳಿ ನಡೆಸಿ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೃಷ್ಣಾ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿರುವುದು, ಮರಳಿಗೆ ಭಾರಿ ಬೇಡಿಕೆ ಮತ್ತು ದರ ಇರುವುದರಿಂದ ದಂಧೆಕೋರರು ಹಳ್ಳಗಳ ಮರಳು ಕದಿಯಲು ಮುಂದಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.