ADVERTISEMENT

ರಾಯಚೂರು: ಆಗಸ್ಟ್‌ 14 ರಿಂದ ರಾಯರ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 17:24 IST
Last Updated 16 ಜುಲೈ 2019, 17:24 IST
ಶ್ರೀ ರಾಘವೇಂದ್ರ ಸ್ವಾಮೀಜಿ
ಶ್ರೀ ರಾಘವೇಂದ್ರ ಸ್ವಾಮೀಜಿ   

ರಾಯಚೂರು: ಮಂತ್ರಾಲಯದಲ್ಲಿಶ್ರಾವಣ ಶುಕ್ಲ ಚತುರ್ದಶಿಯಿಂದ ಶ್ರಾವಣ ಕೃಷ್ಣ ಪಂಚಮಿವರೆಗೆ ಆಗಸ್ಟ್‌ 14 ರಿಂದ 20 ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ನಡೆಯಲಿದೆ.

14 ರ ಸಂಜೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಪ್ತ ರಾತ್ರೋತ್ಸವಕ್ಕೆ ಚಾಲನೆ ನೀಡುವರು. 16 ರಂದು ರಾಯರ ಪೂರ್ವಾರಾಧನೆ ನಿಮಿತ್ತ ತಿರುಮಲದ ಶ್ರೀ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ ಮಡಲಾಗುವುದು. 17 ರಂದು ರಾಯರ ಮಧ್ಯಾರಾಧನೆ ಹಾಗೂ 18 ರಂದು ಮಹಾರಥೋತ್ಸವ ಜರುಗುವುದು.

ಪ್ರತಿದಿನ ನಸುಕಿನ 4 ರಿಂದ 8.30 ರವರೆಗೂ ನಿರ್ಮಲ್ಯ ವಿಸರ್ಜನ, ಉತ್ಸವ ರಾಯರ ಪಾದಪೂಜೆ ಮತ್ತು ಪಂಚಾಮೃತ, ಬೆಳಿಗ್ಗೆ 11 ರಿಂದ ಮೂಲ ರಘುಪತಿ ವೇದವ್ಯಾಸರಾಜರ ಪೂಜೆ ನಡೆಯುವುದು. ಸಂಜೆ 5 ಕ್ಕೆ ವಿಶೇಷ ಉಪನ್ಯಾಸ. ಸಂಜೆ 5.30 ರಿಂದ ರಾತ್ರಿ 11 ರವರೆಗೂ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.