ಹಟ್ಟಿ ಚಿನ್ನದ ಗಣಿ: ಪೈದೊಡ್ಡಿ ಗ್ರಾಮದ ಪದ್ದಮ್ಮ ಬಸವರಾಜು ಅವರಿಗೆ ಸೇರಿದ ಸಜ್ಜೆ ಗೂಡಿಗೆ ಕಿಡಿಗೇಡಿಗಳು ಶನಿವಾರ ರಾತ್ರಿ ಬೆಂಕಿ ಹಂಚಿದ್ದಾರೆ.
ರಾಶಿ ಮಾಡಲು ಪದ್ದಮ್ಮ ಅವರು ತಮ್ಮ ಜಮೀನಿನಲ್ಲಿ ಸಜ್ಜೆ ಗೂಡು ಹಾಕಿದ್ದರು. ಕಿಡಿಗೇಡಿಗಳು ಶನಿವಾರ ರಾತ್ರಿ ಬೆಂಕಿ ಹಚ್ಚಿದ್ದು, ಸಜ್ಜೆ ಗೂಡು ಸಂಪೂರ್ಣವಾಗಿ ಸುಟ್ಟು ಹೊಗಿದೆ. ಅಂದಾಜು ₹80 ಸಾವಿರ ನಷ್ಟ ಉಂಟಾಗಿದೆ.
‘ಸ್ಥಳಕ್ಕೆ ಬಾರದ ಅಧಿಕಾರಿಗಳು’: ಪದ್ದಮ್ಮ ಅವರ ಸಜ್ಜೆ ಗೂಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ಸ್ಥಳಕ್ಕೆ ಬಂದಿಲ್ಲ. ಸರ್ಕಾರ ರೈತರ ನೆರವಿಗೆ ಬರಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.