ADVERTISEMENT

ಸಿರುಗುಪ್ಪ | ಆಸ್ತಿ ವಿವಾದ, ಸೋದರಳಿಯರಿಂದ‌ ಮಾವನ ಕೊಲೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 8:26 IST
Last Updated 17 ಜೂನ್ 2020, 8:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿರುಗುಪ್ಪ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಇಬ್ಬರು ಸೋದರಳಿಯಂದಿರು ತಮ್ಮ ಮಾವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದ ಜಮೀನಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಗ್ರಾಮದ ನಿವಾಸಿ ವಿರೂಪಾಕ್ಷಗೌಡ (48) ಕೊಲೆಯಾದವರು. ಅವರ ಅಕ್ಕನ ಮಕ್ಕಳಾದ ಮಲ್ಲಿಕಾರ್ಜುನ ಗೌಡ ಮತ್ತು‌ ಸಿದ್ದಬಸವನಗೌಡ ಪೊಲೀಸರಿಗೆ ರಾತ್ರಿಯೇ ಶರಣಾಗಿದ್ದಾರೆ

ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಷಯವಾಗಿ ವಿರೂಪಾಕ್ಷಗೌಡ ಹಾಗೂ ಅವರ ಸಹೋದರಿ ನಡುವಿನ ವಿವಾದ ತಾರಕಕ್ಕೇರಿ‌ ಕೊಲೆಯಲ್ಲಿ ಅಂತ್ಯವಾಗಿದೆ.

ಸಿರುಗುಪ್ಪ ಪೊಲೀಸ್ ಠಾಣೆಯ ಸಿಪಿಐ ನೇತೃತ್ವದ ಸಿಬ್ಬಂದಿ ಬಂಡ್ರಾಳು ಗ್ರಾಮಕ್ಕೆ ತೆರಳಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.