ರಾಯಚೂರು: ಭಾರಿ ಮಳೆಯಿಂದಾಗಿ ರಾಯಚೂರು ನಗರದಾದ್ಯಂತ ಶುಕ್ರವಾರ ರಾತ್ರಿಯಿಂದ ವಿದ್ಯುತ್ ಕಡಿತಗೊಳಿಸಲಾಗಿದ್ದು, ಶನಿವಾರ ಮಧ್ಯಾಹ್ನ ಕಳೆದರೂ ಯಥಾಸ್ಥಿತಿ ಮುಂದುವರಿದಿದೆ.
ವಿದ್ಯುತ್ ಅವಲಂಬಿತ ಕೈಗಾರಿಕೆಗಳು, ಹಿಟ್ಟಿನ ಗಿರಣಿ, ಝರಾಕ್ಸ್ ಮಳಿಗೆಗಳು, ಡಿಟಿಪಿ ಕೇಂದ್ರಗಳು ಸೇರಿದಂತೆ ಹಲವು ಕಡೆಗಳಲ್ಲಿ ಶನಿವಾರ ಎಂದಿನಂತೆ ಕೆಲಸ ಆರಂಭವಾಗಿಲ್ಲ.
ನಗರದ ಕೆಇಬಿ ಕಾಲೋನಿಯಲ್ಲಿರುವ 220 ಕೆವಿ ಫೀಡರ್ ಸುಸ್ಥಿತಿಯಲ್ಲಿದ್ದರೂ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.
'ಭಾರಿ ಮಳೆಯಿಂದಾಗಿ ರಾಯಚೂರಿನಲ್ಲಿ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳಲ್ಲಿ ಸಮಸ್ಯೆ ಆಗಿದೆ. ಈ ಕಾರಣದಿಂದ ವಿದ್ಯುತ್ ಸ್ಥಗಿತ ಮಾಡಲಾಗಿದೆ. ಎಲ್ಲ ಕಡೆಗೂ ಪರಿಶೀಲನೆ ಮಾಡಿದ ಬಳಿಕವೇ ಮತ್ತೆ ವಿದ್ಯುತ್ ಸಂಪರ್ಕ ಕೊಡಲಾಗುತ್ತದೆ' ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.