ADVERTISEMENT

VIDEO| ಬಂದೂಕಿನಿಂದ ಹೆದರಿಸಿ ಯುವಕನ ಅಪಹರಣ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 11:47 IST
Last Updated 16 ನವೆಂಬರ್ 2019, 11:47 IST
   

ರಾಯಚೂರು (ಲಿಂಗಸುಗೂರು): ಜಿಲ್ಲೆಯ ಲಿಂಗಸುಗೂರು ಪಟ್ಟಣದ ಜನದಟ್ಟಣೆ ಇರುವ ಸರ್ಕಾರಿ ಬಸ್ ನಿಲ್ದಾಣ ಪ್ರದೇಶದಿಂದ ಯುವಕನೊಬ್ಬನನ್ನು ಕಾರಿನಲ್ಲಿ ಬಂದಿದ್ದ ಗುಂಪೊಂದು ಶನಿವಾರ ಮಧ್ಯಾಹ್ನ ಅಪಹರಿಸಿಕೊಂಡ ಹೋಗಿರುವ ಘಟನೆ ನೋಡಿರುವ ಜನರು ಬೆಚ್ಚಿಬಿದ್ದಿದ್ದಾರೆ.

ಯುವಕನೊಬ್ಬನ ಹೆಗಲ ಮೇಲೆ ಕೈ ಇಟ್ಟು ಮಾತನಾಡುತ್ತಿದ್ದವರು ಇದ್ದಕ್ಕಿದ್ದಂತೆ ಆತನನ್ನು ಹೊಡೆದು ಎಳೆದುಕೊಂಡು ಹೋಗಲಾರಂಭಿಸಿದ್ದನ್ನು ನೋಡಿದ ಜನರು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಎಂಎಚ್ ಪಾಸಿಂಗ್ ಕಾರಿನಲ್ಲಿ ಬಂದಿದ್ದ ಗುಂಪಿನಲ್ಲಿದ್ದ ಯುವಕನೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಜನರು ಹೆದರಿ ಹಿಂಜರಿದಿದ್ದಾರೆ. ಕೂಡಲೇ ಅಪರಿಚಿತ ಯುವಕನನ್ನು ಅಪರಿಚಿತರ ಗುಂಪು ಕಾರಿನೊಳಗೆ ಹಾಕಿಕೊಂಡು ಶರವೇಗದಲ್ಲಿ ಪರಾರಿಯಾದರು ಎಂದು ಪ್ರತ್ಯೇಕ್ಷ ದರ್ಶಿಗಳು 'ಪ್ರಜಾವಾಣಿ'ಗೆ ತಿಳಿಸಿದರು.

ಘಟನೆ ನಡೆದು ಒಂದು ತಾಸಿನ ಬಳಿಕ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದು, ಸಿಸಿಟಿವಿ ಗಳ ತಪಾಸಣೆ ಆರಂಭಿಸಿದ್ದಾರೆ.

ADVERTISEMENT

ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.