ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಸಮಾಜ ಕಲ್ಯಾಣಧಿಕಾರಿ ವಿಜಯಾ ಅಮಾನತು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ವಿಜಯಾ ಮಲ್ಲೇಶ್
ವಿಜಯಾ ಮಲ್ಲೇಶ್   

ತುರ್ವಿಹಾಳ (ರಾಯಚೂರು ಜಿಲ್ಲೆ): ಸಿಂಧನೂರು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪಿ. ವಿಜಯಾ ಮಲ್ಲೇಶ್ ಅವರನ್ನು ಇಲಾಖೆಯ ಆಯುಕ್ತರು ಅಮಾನತು ಮಾಡಿದ್ದಾರೆ.

ಡಿ. 12ರಂದು 'ಪ್ರಜಾವಾಣಿ'ಯಲ್ಲಿ ‘50 ಮಕ್ಕಳಿಗೆ ಬರೀ 14 ಮಂಚಗಳು’ ಶಿರ್ಷಿಕೆಯಡಿ ಪ್ರಕಟಗೊಂಡ, ತುರ್ವಿಹಾಳದ ಬಾಲಕರ ವಸತಿ ನಿಲಯ ಸಮಸ್ಯೆಗಳ ಕುರಿತ ವರದಿಗೆ ಸ್ಪಂದಿಸಿ ಇಲಾಖೆ ಆಯುಕ್ತ ರಾಕೇಶಕುಮಾರ್ ಅವರು ಅಮಾನತು ಮಾಡಿದ್ದಾರೆ.

ಈ  ಸಂಬಂಧಿಸಿದಂತೆ ವಸತಿ ಶಾಲೆಯ ಮೇಲ್ವಿಚಾರಕ ಪ್ರಭುರಾಜ ಅವರನ್ನು ಈಗಾಗಲೇ ಅಮಾನತು ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.