ತುರ್ವಿಹಾಳ (ರಾಯಚೂರು ಜಿಲ್ಲೆ): ಸಿಂಧನೂರು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪಿ. ವಿಜಯಾ ಮಲ್ಲೇಶ್ ಅವರನ್ನು ಇಲಾಖೆಯ ಆಯುಕ್ತರು ಅಮಾನತು ಮಾಡಿದ್ದಾರೆ.
ಡಿ. 12ರಂದು 'ಪ್ರಜಾವಾಣಿ'ಯಲ್ಲಿ ‘50 ಮಕ್ಕಳಿಗೆ ಬರೀ 14 ಮಂಚಗಳು’ ಶಿರ್ಷಿಕೆಯಡಿ ಪ್ರಕಟಗೊಂಡ, ತುರ್ವಿಹಾಳದ ಬಾಲಕರ ವಸತಿ ನಿಲಯ ಸಮಸ್ಯೆಗಳ ಕುರಿತ ವರದಿಗೆ ಸ್ಪಂದಿಸಿ ಇಲಾಖೆ ಆಯುಕ್ತ ರಾಕೇಶಕುಮಾರ್ ಅವರು ಅಮಾನತು ಮಾಡಿದ್ದಾರೆ.
ಈ ಸಂಬಂಧಿಸಿದಂತೆ ವಸತಿ ಶಾಲೆಯ ಮೇಲ್ವಿಚಾರಕ ಪ್ರಭುರಾಜ ಅವರನ್ನು ಈಗಾಗಲೇ ಅಮಾನತು ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.