ADVERTISEMENT

'ಲವ್ ಕೇಸರಿ' ಸೃಷ್ಟಿಗೆ ಶ್ರೀರಾಮ ಸೇನೆ ಮುಖಂಡನಿಂದ ಕರೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 15:56 IST
Last Updated 11 ಏಪ್ರಿಲ್ 2022, 15:56 IST
'ಲವ್ ಕೇಸರಿ' ಸೃಷ್ಟಿಗೆ ಶ್ರೀರಾಮ ಸೇನೆ ಮುಖಂಡನಿಂದ ಕರೆ
'ಲವ್ ಕೇಸರಿ' ಸೃಷ್ಟಿಗೆ ಶ್ರೀರಾಮ ಸೇನೆ ಮುಖಂಡನಿಂದ ಕರೆ   

ರಾಯಚೂರು: ‘ಲವ್‌ ಜಿಹಾದ್‌ಗೆ ವಿರುದ್ಧವಾಗಿ ಲವ್‌ ಕೇಸರಿ ಮಾಡಿ‘ ಎಂದು ಶ್ರೀರಾಮಸೇನೆಯ ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ಅವರು ಶ್ರೀರಾಮಸೇನೆಯಿಂದ ಆಯೋಜಿಸಿದ್ದ ಹಿಂದುವಿ ಸಮಾವೇಶದಲ್ಲಿ ಕರೆ ನೀಡಿದ್ದಾರೆ.

‘ನಮ್ಮನೆ ಹೆಣ್ಮಕ್ಕಳನ್ನು ಕರೆದೊಯ್ದು ಮಕ್ಕಳು ಹೆರುವ ಮಷಿನ್ ಮಾಡಿದ್ದಾರೆ. ಹೀಗಾಗಿ ಪ್ರತಿ ಕಾರ್ಯಕರ್ತನು ‘ಲವ್ ಕೇಸರಿ‘ ಮಾಡಿ. ಮುಸ್ಲಿಂ ವ್ಯಕ್ತಿ ಹಿಂದೂ ಹೆಣ್ಮಕ್ಕಳಿಗೆ ತೊಂದರೆ ಕೊಟ್ಟರೆ, ನಮಗೆ ಮಾಹಿತಿ ಕೊಡಿ. ಅಂಥವರ ಜನನಾಂಗ ಕತ್ತರಿಸಿ ಹಾಕೋಣ‘ ಎಂದು ಭಾನುವಾರ ತಡರಾತ್ರಿ ನಡೆದ ಸಮಾವೇಶದ ವೇದಿಕೆಯಲ್ಲಿ ಹೇಳಿದ್ದಾರೆ.

ವೇದಿಕೆಯಲ್ಲಿ ರಾಜಾಚಂದ್ರ, ಮಂಜುನಾಥ ಬಾವಿ ಮತ್ತಿತರರು ತಲ್ವಾರ್ ಪ್ರದರ್ಶನ ಪ್ರದರ್ಶನ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.