ADVERTISEMENT

ಮುದಗಲ್: ನೀರಿಗಾಗಿ ಪುರಸಭೆಗೆ ವಿದ್ಯಾರ್ಥಿಗಳ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 13:58 IST
Last Updated 10 ಸೆಪ್ಟೆಂಬರ್ 2024, 13:58 IST
ಮುದಗಲ್ ಪಟ್ಟಣದ ದೇವರಾಜ ಅರಸು ಮೆಟ್ರಿಕ ಪೂರ್ವ ವಸತಿ ನಿಯಲಕ್ಕೆ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ವಿದ್ಯಾರ್ಥಿಗಳು ಪುರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು
ಮುದಗಲ್ ಪಟ್ಟಣದ ದೇವರಾಜ ಅರಸು ಮೆಟ್ರಿಕ ಪೂರ್ವ ವಸತಿ ನಿಯಲಕ್ಕೆ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ವಿದ್ಯಾರ್ಥಿಗಳು ಪುರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು   

ಮುದಗಲ್: ಪಟ್ಟಣದ ದೇವರಾಜ ಅರಸು ಮೆಟ್ರಿಕ್ ಪೂರ್ವ ವಸತಿ ನಿಯಲಕ್ಕೆ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ವಿದ್ಯಾರ್ಥಿಗಳು ಪುರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ವಸತಿ ನಿಲಯಕ್ಕೆ ಮೂರು ದಿನಗಳಿಂದ ನೀರು ಬಂದಿಲ್ಲ. ಮುಖ ತೊಳೆಯಲು, ಕುಡಿಯಲು, ಸ್ನಾನ, ಶೌಚಕ್ಕೆ ನೀರು ಇಲ್ಲದೆ ಪರದಾಡುತ್ತಿದ್ದೇವೆ. ಊಟ ಮಾಡಿ ಪೇಪರ್‌ನಿಂದ ಕೈ ಒರೆಸಿಕೊಳ್ಳುತ್ತಿದ್ದೇವೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವಹಿಸಿದ್ದಾರೆ. ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮಳೆ ಹೆಚ್ಚಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಫಾಗಿಂಗ್ ಮಾಡಿಲ್ಲ. ನಮಗೆ ರೋಗ ಬರುವ ಆತರಂಕ ಕಾಡುತ್ತಿದೆ. ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡಿಸಬೇಕೆಂದು ಒತ್ತಾಯಿಸಿದರು.

ADVERTISEMENT

ಪುರಸಭೆಯಲ್ಲಿ ಅಧಿಕಾರಿಗಳು ಯಾರು ಇಲ್ಲದರಿಂದ ಶಾಲೆಗೆ ಹೋಗಲು ಸಮಯವಾಗುತ್ತಿದೆ ಎಂದು ಪ್ರತಿಭಟನೆ ನಿಲ್ಲಿಸಿ ಶಾಲೆಗೆ ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.