ADVERTISEMENT

ಮಸ್ಕಿ: ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಮೂರ್ಛೆ, ಸಾವು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 10:35 IST
Last Updated 13 ಅಕ್ಟೋಬರ್ 2020, 10:35 IST
ಕಾರಿನ ಹಿಂಬದಿ ನುಜ್ಜಾಗಿರುವ ದೃಶ್ಯ. ಒಳಚಿತ್ರದಲ್ಲಿ ಮೃತ ವ್ಯಕ್ತಿ ಸದಾನಂದಪ್ಪ
ಕಾರಿನ ಹಿಂಬದಿ ನುಜ್ಜಾಗಿರುವ ದೃಶ್ಯ. ಒಳಚಿತ್ರದಲ್ಲಿ ಮೃತ ವ್ಯಕ್ತಿ ಸದಾನಂದಪ್ಪ   

ಮಸ್ಕಿ (ರಾಯಚೂರು ಜಿಲ್ಲೆ): ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಮೂರ್ಛೆ ಬಂದು ಮುಂದಿನ ಕಾರಿಗೆ ಡಿಕ್ಕಿ ಹೊಡೆದಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗಮಧ್ಯೆಯೇ ಸಾವನ್ನಪ್ಪಿರುವ ಘಟನೆ ಮಸ್ಕಿ ಬಸ್‌ ನಿಲ್ದಾಣದ ಬಳಿ ಮಂಗಳವಾರ ನಡೆದಿದೆ.

ಲಿಂಗಸುಗೂರು ಪಟ್ಟಣ ನಿವಾಸಿ ಸದಾನಂದಪ್ಪ (52) ಮೃತ ವ್ಯಕ್ತಿ. ಲಿಂಗಸುಗೂರಿನಿಂದ ಬೆಂಗಳೂರಿಗೆ ಹಿಂತಿರುವಾಗ ಅಪಘಾತ ಉಂಟಾಗಿದೆ. ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದ ಸದಾನಂದಪ್ಪ ಅವರು, ಕಳೆದ ಬುಧವಾರ ತಾಯಿ ತೀರಿಕೊಂಡಿದ್ದರಿಂದ ಅಂತ್ಯಕ್ರಿಯೆಗಾಗಿ ಕುಟುಂಬಸಮೇತ ಬಂದಿದ್ದರು.

ಡಿಕ್ಕಿಯ ರಭಸಕ್ಕೆ ಮುಂದೆ ಸಂಚರಿಸುತ್ತಿದ್ದ ಕಾರಿನ ಹಿಂಬದಿ ನುಜ್ಜಾಗಿದೆ. ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.