ADVERTISEMENT

ಅಲೆಮಾರಿ ಅಭಿವೃದ್ಧಿಗೆ ಸದಸ್ಯತ್ವ ನೀಡಿ: ಹೊಲಯದಾಸರ ಸಮಾಜ ಸೇವಾ ಸಂಘ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 15:35 IST
Last Updated 13 ನವೆಂಬರ್ 2020, 15:35 IST
ರಾಯಚೂರು ತಾಲ್ಲೂಕು ಚೆನ್ನದಾಸರ ಮಾಲದಾಸರಿ, ಹೊಲಸೆದಾಸರ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಒತ್ತಾಯಿಸಿದರು
ರಾಯಚೂರು ತಾಲ್ಲೂಕು ಚೆನ್ನದಾಸರ ಮಾಲದಾಸರಿ, ಹೊಲಸೆದಾಸರ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಒತ್ತಾಯಿಸಿದರು   

ರಾಯಚೂರು: ಪರಿಶಿಷ್ಟ ಜಾತಿ, ಅಲೆಮಾರಿ, ಮಾಲದಾಸರಿ, ಚನ್ನದಾಸರು, ಹೊಲೆಯದಾಸರು, ಸಮುದಾಯಗಳ ಅಭ್ಯರ್ಥಿಗಳನ್ನು ಅಲೆಮಾರಿ ಅಭಿವೃದ್ಧಿ ಅನುಷ್ಠಾನಸಮಿತಿಗೆ ನಾಮ ನಿರ್ದೇಶಿತ ಸದಸ್ಯತ್ವ ಆಯ್ಕೆಯಲ್ಲಿ ಆದ ಅನ್ಯಾಯವನ್ನು ಸರಿಪಡಿಸುವಂತೆ ತಾಲ್ಲೂಕು ಚೆನ್ನದಾಸರ ಮಾಲದಾಸರಿ, ಹೊಲಯದಾಸರ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಅನಾದಿಕಾಲದಿಂದ ಅಸ್ಪೃಶ್ಯಕ್ಕೆ ಒಳಗಾಗಿ, ಬಿಕ್ಷೆ ಬೇಡಿ ಜೀವನ ನಡೆಸುವ ಅಲೆಮಾರಿ ಜನಾಂಗದವರು ರಾಜಕೀಯ, ಆರ್ಥಿಕ, ಸಾಮಾಜಿಕ ಹಿಂದುಳಿದಿದ್ದಾರೆ. ಜಿಲ್ಲೆಯಲ್ಲಿ ಈ ಜನಾಂಗದವರು ಬಹುಸಂಖ್ಯತರಾಗಿದ್ದರೂ ಕೂಡ ಜಿಲ್ಲಾ ಮಟ್ಟದ ಅಲೆಮಾರಿ ಅಭಿವೃದ್ಧಿ ಅನುಷ್ಠಾನದ ನಾಮ ನಿರ್ದೇಶಿತ ಸದಸ್ಯತ್ವದಲ್ಲಿ ಪರಿಶಿಷ್ಟ ಜಾತಿ ಅಲೆಮಾರಿ, ಮಾಲದಾಸರಿ, ಚನ್ನದಾಸರು, ಹೊಲೆಯದಾಸರ, ಸಮುದಾಯದ ಅಭ್ಯರ್ಥಿಗಳನ್ನು ಆಯ್ಕೆಯಲ್ಲಿ ಕಡೆಗಣಿಸಿ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ದೂರಿದರು.

ಪರಿಶಿಷ್ಟ ಜಾತಿಯ ಅಲೆಮಾರಿ, ಮಾಲದಾಸರಿ, ಚನ್ನದಾಸರು, ಹೊಲೆಯ ದಾಸರು ಸಮುದಾಯದ ಅಭ್ಯರ್ಥಿಗಳನ್ನು ಅಲೆಮಾರಿ ಅಭಿವೃದ್ಧಿ ಅನುಷ್ಟಾನ ಸಮಿತಿಗೆ ನಾಮ ನಿರ್ದೇಶನ ಸದಸ್ಯತ್ವಕ್ಕೆ ಕನಿಷ್ಟ ಒಬ್ಬರನ್ನು ಆಯ್ಕೆ ಮಾಡಿ ಸದಸ್ಯತ್ವ ನೀಡಬೇಕು. ಇನ್ನೊಬ್ಬ ಸದಸ್ಯನನ್ನು ವಿಶೇಷ ಆಹ್ವಾನಿತರಾಗಿ ಆಯ್ಕೆ ಮಾಡಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಂಘದ ಅಧ್ಯಕ್ಷ ಹನುಮಂತ, ಉಪಾಧ್ಯಕ್ಷ ವೆಂಕಟೇಶ, ಕಾರ್ಯದರ್ಶಿ ಬಿ.ರಂಗಮುನಿದಾಸ, ಗುರುನಂದನ, ಗೋಪಾಲ, ನರಸಿಂಹ, ನಾಗೇಶ, ದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.