ADVERTISEMENT

ವಡವಟ್ಟಿ ರಂಗನಾಥ ಸ್ವಾಮಿ ಜಾತ್ರೆ ರದ್ದು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 11:25 IST
Last Updated 20 ಏಪ್ರಿಲ್ 2021, 11:25 IST
ವಡವಟ್ಟಿ ರಂಗನಾಥ ಸ್ವಾಮಿ ಮೂರ್ತಿ
ವಡವಟ್ಟಿ ರಂಗನಾಥ ಸ್ವಾಮಿ ಮೂರ್ತಿ   

ಸಿರವಾರ: ಏ.21 ಮತ್ತು 22 ರಂದು ನಡೆಯಬೇಕಾಗಿದ್ದ ತಾಲ್ಲೂಕಿನ ವಡವಟ್ಟಿ ಗ್ರಾಮದ ರಂಗನಾಥ ಸ್ವಾಮಿ ಜಾತ್ರೆ ರದ್ದುಪಡಿಸಿ ತಹಶೀಲ್ದಾರ್ ಮಧುರಾಜ ಆದೇಶ ಹೊರಡಿಸಿದ್ದಾರೆ.

ಕೊರೊನಾ ಕಾರಣ ರಾಜ್ಯ ಸರ್ಕಾರದ ನಿರ್ದೇಶನದಂತೆ ಎಲ್ಲ ಜಾತ್ರೆ, ಉತ್ಸವ, ಸಭೆ ಹಾಗೂ ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ ವಡವಟ್ಟಿ ಜಾತ್ರೆಯ ರಥೋತ್ಸವ, ಉಚ್ಛಾಯ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT