ADVERTISEMENT

ಮಂತ್ರಾಲಯದಲ್ಲಿ ರಾಯರ 427ನೇ ವರ್ಧಂತಿ ಉತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 4:23 IST
Last Updated 9 ಮಾರ್ಚ್ 2022, 4:23 IST
ಮಂತ್ರಾಲಯದಲ್ಲಿ ರಾಯರ 427ನೇ ವರ್ಧಂತಿ ಉತ್ಸವ ಸಂಭ್ರಮ
ಮಂತ್ರಾಲಯದಲ್ಲಿ ರಾಯರ 427ನೇ ವರ್ಧಂತಿ ಉತ್ಸವ ಸಂಭ್ರಮ   

ರಾಯಚೂರು: ಮಂತ್ರಾಲಯದಲ್ಲಿ ಗುರು ವೈಭವೋತ್ಸವದ ಕೊನೆಯ ದಿನ ಬುಧವಾರ, ಶ್ರೀರಾಘವೇಂದ್ರ ಸ್ವಾಮಿಗಳ 427ನೇ ‌ವರ್ಧಂತಿ ಉತ್ಸವ ಸಂಭ್ರಮದಿಂದ ನೆರವೇರುತ್ತಿದೆ.

ಟಿಟಿಡಿ ಅಧಿಕಾರಿಗಳು ತಿರುಪತಿ ಶ್ರೀನಿವಾಸ ದೇವರ ಶೇಷವಸ್ತ್ರ ತೆಗೆದುಕೊಂಡು ಬಂದಿದ್ದು, ಮೆರವಣಿಗೆ ಮೂಲಕ ಮಠಕ್ಕೆ ಆಗಮಿಸಿದರು. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರಿಗೆ ಶೇಷ ವಸ್ತ್ರ ಹಸ್ತಾಂತರಿಸಿದರು. ಹರಿವಾಣದಲ್ಲಿ ಇರಿಸಿದ್ದ ಶೇಷವಸ್ರ್ರವನ್ನು ಶಿರದ ಮೇಲಿಟ್ಟುಕೊಂಡ ಶ್ರೀಗಳು ಆನಂತರ ರಾಯರ ಸನ್ನಿಧಿಗೆ ಸಮರ್ಪಿಸಿದರು.

ಆನಂತರ ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ನೆರವೇರಲಿದೆ.

ADVERTISEMENT

ಉತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ಭಕ್ತರು ಭಕ್ತಿಭಾವದಿಂದ ಆಗಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.