ADVERTISEMENT

ವಾಸವಿ ಜಯಂತಿ; ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 11 ಮೇ 2022, 11:11 IST
Last Updated 11 ಮೇ 2022, 11:11 IST
ಕವಿತಾಳದಲ್ಲಿ ವಾಸವಿ ಜಯಂತಿ ನಿಮಿತ್ತ ಬುಧವಾರ ಭಾವಚಿತ್ರದ ಮೆರವಣಿಗೆ ನಡೆಯಿತು
ಕವಿತಾಳದಲ್ಲಿ ವಾಸವಿ ಜಯಂತಿ ನಿಮಿತ್ತ ಬುಧವಾರ ಭಾವಚಿತ್ರದ ಮೆರವಣಿಗೆ ನಡೆಯಿತು   

ಪ್ರಜಾವಾಣಿ ವಾರ್ತೆ

ಕವಿತಾಳ: ಪಟ್ಟಣದಲ್ಲಿ ವಾಸವಿ ಜಯಂತಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

ಇಲ್ಲಿನ ತ್ರಯಂಭಕೇಶ್ವರ ದೇವಸ್ಥಾನದಿಂದ ವಾಸವಿ ದೇವಸ್ಥಾನದವರೆಗೆ ಕನ್ಯಕಾ ಪರಮೇಶ್ವರಿಯ ಭಾವಚಿತ್ರದ ಮೆರವಣಿಗೆ ಕುಂಭ, ಕಳಸಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಯುವಕರ ಭಜನೆ ಹಾಡುಗಳು ಮೆರವಣಿಗೆಗೆ ಮೆರಗು ನೀಡಿತು.

ADVERTISEMENT

ಜಯಂತಿ ನಿಮಿತ್ತ ವಾಸವಿ ಮೂರ್ತಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾ ಮಂಗಳಾರತಿ, ತೊಟ್ಟಿಲು ಸೇವೆ ಮತ್ತು ಮಹಿಳೆಯರ ಕೋಲಾಟ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಅರ್ಚಕ ಜಯತೀರ್ಥ ಆಚಾರ್ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಆರ್ಯವೈಶ್ಯ ಸಮಾಜದ ವತಿಯಿಂದ ಪಟ್ಟಣ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

ಗುರುರಾಜ ಬಾಗೋಡಿ, ಶ್ರೀಧರ ಮಾನ್ವಿ, ಶಿವರಾಮಯ್ಯ, ಪುರುಷೋತ್ತಮ ಇಲ್ಲೂರು, ಲಕ್ಷ್ಮೀಕಾಂತ ಇಲ್ಲೂರು, ಲಿಂಗರಾಜ ಇಲ್ಲೂರು, ರಮೇಶ ಇಲ್ಲೂರು, ಬಿ.ಕೆ.ವೆಂಕಟೇಶ, ಎಂ.ರಾಘವೇಂದ್ರ, ಪ್ರಕಾಶ ಇಲ್ಲೂರು, ಅಮರೇಶ, ಮಲ್ಕಾಜಯ್ಯ, ರವಿ, ವೆಂಕಟೇಶ ಬಾಗೋಡಿ, ಅರವಿಂದ್ ಇಲ್ಲೂರು, ವೆಂಕಟೇಶ ಇಲ್ಲೂರು, ಗುರುರಾಜ ಇಲ್ಲೂರು , ಮಂಜುಳಾ ಇಲ್ಲೂರು, ರಜನಿ ಕೋಸ್ಗಿ, ಭಾಗ್ಯಲಕ್ಷ್ಮೀ, ಪ್ರಮೀಳಾ ಮತ್ತು ಸುಮಾ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.