ರಾಯಚೂರು: ರಾಜ್ಯೋತ್ಸವ ನಿಮಿತ್ತ ಜಿಲ್ಲಾ ಪೊಲೀಸ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಭಾಷಣ ಮಾಡಿದರು.
ಭಾಷಣದಲ್ಲಿ ಸಚಿವರು ಉಚ್ಛರಿಸಿದ ಕನ್ನಡ ಪದಗಳು ತಾಳ ತಪ್ಪಿದ್ದು ಗಮನ ಸೆಳೆಯಿತು.
ಬೇರೆಂದ್ರ (ಬೇಂದ್ರೆ), ಸಂಘ- ಸಮಸ್ಯೆಗಳು (ಸಂಘ- ಸಂಸ್ಥೆಗಳು), ಸಸಂತ್ರ (ಸ್ವತಂತ್ರ), ಅಂದ್ರಗೀನ (ಅಂದರೆ), ದೇವಪ್ರಾಣಿಯ ಅಶೋಕ (ದೇವನಾಂಪ್ರಿಯ ಅಶೋಕ), ಪ್ರಗತಿ-ಪದಕದಲ್ಲಿ (ಪ್ರಗತಿ ಪಥದಲ್ಲಿ)... ಸಚಿವರು ಭಾಷಣದಲ್ಲಿ ಉಚ್ಚರಿಸಿದ ಕೆಲವು ಪದಗಳಿವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.