ADVERTISEMENT

ಕಾಂಗ್ರೆಸ್‌–ಜೆಡಿಎಸ್‌ ಬೆಂಬಲಿಗರ ನಡುವೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 9:00 IST
Last Updated 14 ಮಾರ್ಚ್ 2018, 9:00 IST

ಮಾಗಡಿ: ಫೇಸ್‌ಬುಕ್‌ ಮತ್ತು ವಾಟ್ಸ್‌ ಆ್ಯಪ್‌ಗಳ ಪರ ಮತ್ತು ವಿರೋಧ ಬರಹಗಳಿಗೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಕಲ್ಯಬಾಗಿಲು ಬಳಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಬಲಿಗ ಯುವಕರು ಮಾತಿನ ಚಕಮಕಿ ನಡೆಸಿದ್ದಾರೆ.

ಶಾಸಕ ಎಚ್‌.ಸಿ.ಬಾಲಕೃಷ್ಣ ಬೆಂಬಲಿಗ ಆನಂದ್‌ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಅವರ ಬೆಂಬಲಿಗ ಮುನಿರಾಜು ಅವರು ಪರಸ್ಪರ ತಮ್ಮ ನಾಯಕರ ಬಗ್ಗೆ ಪರ ಮತ್ತು ವಿರೋಧವಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿಕೊಂಡಿದ್ದಾರೆ.

ಶಾಸಕರ ಬೆಂಬಲಿಗರಾದ ಮೂರ್ತಿ ಮತ್ತು ಆನಂದ್‌ ಅವರ ಮನೆಯ ಬಳಿಗೆ ಎ.ಮಂಜುನಾಥ ಬೆಂಬಲಿಗರು ಹೋಗಿ ಪ್ರಶ್ನಿಸಿದ್ದರು. ಉಭಯ ಬಣಗಳ ಯುವಕರು ಪರಸ್ಪರ ಮಾತಿನ ಚಕಮುಕಿ ನಡೆಸಿದ್ದಾರೆ.

ADVERTISEMENT

ಪೊಲೀಸರು ಮದ್ಯ ಪ್ರವೇಶಿಸಿ ಎರಡು ಕಡೆಯ ಯುವಕರಿಗೆ ಬುದ್ದಿ ಹೇಳಿ ಘಟನೆಯನ್ನು ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.