ADVERTISEMENT

ಮಾಗಡಿ: ಸ್ಕೂಟರ್‌ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 2:31 IST
Last Updated 2 ನವೆಂಬರ್ 2020, 2:31 IST
ಕನಕಪುರ ತಾಲ್ಲೂಕಿನ ಕಸಬಾ ಹೋಬಳಿಯ ಕೆರಳಾಳುಸಂದ್ರ ಗ್ರಾಮದ ಕೊಪ್ಪಲಿನಲ್ಲಿದ್ದ ಕುರಿಗಳು ಮೃತಪಟ್ಟಿರುವುದು
ಕನಕಪುರ ತಾಲ್ಲೂಕಿನ ಕಸಬಾ ಹೋಬಳಿಯ ಕೆರಳಾಳುಸಂದ್ರ ಗ್ರಾಮದ ಕೊಪ್ಪಲಿನಲ್ಲಿದ್ದ ಕುರಿಗಳು ಮೃತಪಟ್ಟಿರುವುದು   

ಮಾಗಡಿ: ಗುಡೇಮಾರನಹಳ್ಳಿ ರಸ್ತೆಯ ದೊಡ್ಡರಂಗಯ್ಯನ ಪಾಳ್ಯ ಗೇಟ್‌ ಬಳಿ ಗೂಡ್ಸ್‌ ವ್ಯಾನ್‌ ಡಿಕ್ಕಿ ಹೊಡೆದು ಸ್ಕೂಟರ್‌ ಸವಾರ ಮತ್ತು ಹಸು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಚಕ್ರಬಾವಿ ಗ್ರಾಮದ ಗಂಗಾಧರ್‌(45) ಮೃತಪಟ್ಟವರು. ಮಾಗಡಿಯಿಂದ ಗುಡೇಮಾರನಹಳ್ಳಿ ಕಡೆಗೆ ಅತಿವೇಗವಾಗಿ ಚಲಿಸುತ್ತಿದ್ದ ಗೂಡ್ಸ್‌ ವ್ಯಾನ್‌ ರಸ್ತೆ ದಾಟುತ್ತಿದ್ದ ಹಸುವಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಚಾಲಕ ಪರಾರಿಯಾಗಿದ್ದಾನೆ.

ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದ ಗಂಗಾಧರ್‌ ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತ ಹಸು ರೈತ ನಾಗರಾಜು ಎಂಬುವರಿಗೆ ಸೇರಿದೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.