ರಾಮನಗರ: ತಾಲ್ಲೂಕಿನ ಸಂಗನಬಸವನ ದೊಡ್ಡಿ ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ಟಿಪ್ಪರ್ ಲಾರಿಯೊಂದು ಮೇಲ್ಸೇತುವೆ ಮೇಲೆ ಒರಗಿ ನಿಂತಿದ್ದು, ಅನಾಹುತವೊಂದು ತಪ್ಪಿದೆ.
ಬೆಳಿಗ್ಗೆ ಕಾರ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಎಂ ಸ್ಯಾಂಡ್ ತುಂಬಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮೇಲ್ಸೇತುವೆಯ ತಡೆಗೋಡೆ ಮೇಲೆ ಮೇಲೆ ಒರಗಿ ನಿಂತಿತು. ಸೇತುವೆ ಕೆಳಗೆ ಎಕ್ಸ್ ಪ್ರೆಸ್ ವೇನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಲಾರಿ ಕೆಳಗೆ ಉರುಳಿ ಬಿದ್ದಿದ್ದರೆ ಅವಘಡ ಸಂಭವಿಸುವ ಸಾಧ್ಯತೆ ಇತ್ತು.
ಘಟನೆಯಿಂದ ಯಾರಿಗೂ ಹೆಚ್ಚು ತೊಂದರೆ ಆಗಿಲ್ಲ. ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.