ADVERTISEMENT

ಗಿರಿಧರ್‌ ನೇತೃತ್ವದ ತಂಡಕ್ಕೆ ಜಯ

ವಕೀಲರ ಸಂಘದ ತಾಲ್ಲೂಕು ಘಟಕ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 10:07 IST
Last Updated 24 ಮಾರ್ಚ್ 2020, 10:07 IST
ವಕೀಲರ ಸಂಘದ ನೂತನ ಪದಾಧಿಕಾರಿಗಳೊಂದಿಗೆ ವಕೀಲರು
ವಕೀಲರ ಸಂಘದ ನೂತನ ಪದಾಧಿಕಾರಿಗಳೊಂದಿಗೆ ವಕೀಲರು   

ಕನಕಪುರ: ವಕೀಲರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಹಿಂದಿನ ಅವಧಿಯ ಅಧ್ಯಕ್ಷರಾಗಿದ್ದ ಕೆ.ಎಸ್‌.ಗಿರಿಧರ್‌ ಅವರ ನೇತೃತ್ವದ ತಂಡ ಗೆಲುವು ಸಾಧಿಸಿತು.

ಸಂಘದ ಆವರಣದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಎಸ್‌.ವಿ.ವೀರಪ್ಪ ಅವರಿಗೆ 85, ಪ್ರತಿಸ್ಪರ್ಧಿ ಕೆ.ಮಾದೇಗೌಡ ಅವರಿಗೆ 53 ಮತಗಳು ಲಭಿಸಿ, 2 ಮತಗಳು ತಿರಸ್ಕೃತಗೊಂಡವು. 32 ಮತಗಳ ಅಂತರದಿಂದ ಎಸ್‌.ವಿ.ವೀರಪ್ಪ ಗೆಲುವು ಸಾಧಿಸಿದರು.

ಉಪಾಧ್ಯಕ್ಷ ಸ್ಥಾನದ ಟಿ.ಕೆ.ರವಿಗೆ 93, ಪ್ರತಿಸ್ಪರ್ಧಿ ಎ.ಗೋವಿಂದರಾಜುಗೆ 45, ಡಿ.ಕೆಂಪೇಗೌಡ ಅವರಿಗೆ 2 ಮತಗಳು ಲಭಿಸಿದವು. 48 ಮತಗಳ ಅಂತರದಿಂದ ಟಿ.ಕೆ.ರವಿ ಜಯಗಳಿಸಿದರು.

ADVERTISEMENT

ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ವೈರಮುಡಿಗೆ 82 ಮತ, ಪಿ.ಶಿವರುದ್ರಯ್ಯಗೆ 57 ಮತ,1 ಮತ ತಿರಸ್ಕೃತಗೊಂಡು 25 ಮತಗಳ ಅಂತರದಿಂದ ವೈರಮುಡಿ ಗೆಲುವು ಸಾಧಿಸಿದರು.

ಖಜಾಂಚಿ ಸ್ಥಾನದ ಸಿದ್ದರಾಜುಗೆ 74, ಸಾಗರ್‌ ಟಿ.ಎಸ್‌ಗೆ 65 ಮತ, 1 ಮತ ತಿರಸ್ಕೃತಗೊಂಡು ಸಿದ್ದರಾಜು 19 ಮತಗಳನ್ನು ಹೆಚ್ಚಿಗೆ ಪಡೆದು ಜಯಸಾಧಿಸಿದರು.

ಚುನಾವಣೆಯಲ್ಲಿ 143 ಮತಗಳಿದ್ದು, ಅವುಗಳಲ್ಲಿ 140 ಮತಗಳು ಮಾತ್ರ ಚಲಾವಣೆಗೊಂಡು, ಮೂವರು ಮತದಾನ ಮಾಡದೆ ದೂರ ಉಳಿದಿದ್ದರು. ರೂರಲ್‌ ಪದವಿಪೂರ್ವ ಕಾಲೇಜಿನ ಅಧೀಕ್ಷಕ ಡಿ. ರಾಜು ಚುನಾವಣೆ ನಡೆಸಿಕೊಟ್ಟರು.

ನೂತನವಾಗಿ ಆಯ್ಕೆಯಾದ ಎಸ್‌.ವಿ.ವೀರಪ್ಪ, ಟಿ.ಕೆ.ರವಿ, ವೈರಮುಡಿ, ಸಿದ್ದರಾಜು ಅವರುಗಳನ್ನು ವಕೀಲರು ಅಭಿನಂಧಿಸಿ ಶುಭಾಷಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.