ADVERTISEMENT

Bengaluru Mysuru Expressway- ಹೆದ್ದಾರಿ ಮಧ್ಯೆಯೇ ಲಾರಿ ಹಿಮ್ಮುಖ ತಿರುವು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 10:23 IST
Last Updated 25 ಆಗಸ್ಟ್ 2023, 10:23 IST
   

ರಾಮನಗರ: ನಗರದ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ನೀರಿನ ಟ್ಯಾಂಕಿನ ಲಾರಿಯೊಂದು ಹಿಮ್ಮುಖ ತಿರುವು ತೆಗೆದುಕೊಂಡು ಆತಂಕ ಸೃಷ್ಟಿಸಿರುವ ಘಟನೆ ಹೊರವಲಯದ ಬಸವನಪುರ ಬಳಿ ಶುಕ್ರವಾರ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಲಾರಿಯು, ರಸ್ತೆ ಬದಿಯ ಗಿಡಗಳಿಂದ ನೀರು ಹಾಯಿಸಲಾಗುತ್ತಿತ್ತು. ಗಿಡಗಳ ಸಾಲು ಮುಗಿದ ಬಳಿಕ ಮುಂದೆ ಸಿಗುವ ಯೂ ಟರ್ನ್‌ನಲ್ಲಿ ತಿರುವು ತೆಗೆದುಕೊಳ್ಳುವ ಬದಲು, ಚಾಲಕ ರಸ್ತೆಯಲ್ಲಿ ತಿರುವು ತೆಗೆದುಕೊಂಡಿದ್ದಾನೆ.

ಇದೇ ವೇಳೆ ವೇಗವಾಗಿ ಬಂದ ಕಾರೊಂದು ಬ್ರೇಕ್‌ ಹಾಕಿ ಲಾರಿಗೆ ಅತ್ಯಂತ ಸಮೀಪದಲ್ಲಿ ಬಂದು ನಿಂತಿದೆ. ಕೂದಲೆಳೆಯ ಅಂತರದಲ್ಲಿ ಅನಾಹುತ ತಪ್ಪಿದೆ. ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.