ADVERTISEMENT

ಕ್ವಾರಿಯೊಂದಕ್ಕೆ ಸ್ಫೋಟಕ ಸಾಗಿಸುತ್ತಿದ್ದ ಕಾರು ಸ್ಫೋಟ; ವ್ಯಕ್ತಿ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 13:10 IST
Last Updated 16 ಆಗಸ್ಟ್ 2021, 13:10 IST
ಒಳಚಿತ್ರದಲ್ಲಿ ಮೃತ ಮಹೇಶ್
ಒಳಚಿತ್ರದಲ್ಲಿ ಮೃತ ಮಹೇಶ್   

ಕನಕಪುರ: ಇಲ್ಲಿನ ಮರಳೇಗವಿ ಮಠದ ಸಮೀಪ ಸೋಮವಾರ ಸಂಜೆ ಕಾರ್‌ ಒಂದು ಸ್ಫೋಟಗೊಂಡಿದ್ದು, ಅದರೊಳಗಿನ ವ್ಯಕ್ತಿ ಸಜೀವವಾಗಿ ದಹನಗೊಂಡಿದ್ದಾರೆ.

ಕನಕಪುರ ನಿವಾಸಿ ಮಹೇಶ್ (48) ಮೃತರು. ಇವರು ಕನಕಪುರದಿಂದ ಮಠದ ಸಮೀಪ ಇರುವ ಕಲ್ಲು ಗಣಿಗಾರಿಕೆ ಕ್ವಾರಿಯೊಂದಕ್ಕೆ ಕಾರಿನಲ್ಲಿ ಸ್ಫೋಟಕ ಸಾಮಗ್ರಿ ತುಂಬಿಕೊಂಡು ಹೊರಟಿದ್ದರು ಎನ್ನಲಾಗಿದೆ. ಈ ಸಂದರ್ಭ ಏಕಾಏಕಿ ಸ್ಫೋಟ ಸಂಭವಿಸಿದ್ದು, ಕಾರು ಸಂಪೂರ್ಣ ಛಿದ್ರವಾಗಿದೆ. ಮಹೇಶ್‌ ಅವರ ದೇಹ ಸಹ ತುಂಡು ತುಂಡಾಗಿದೆ.

ಕನಕಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.