ADVERTISEMENT

ಚನ್ನಪಟ್ಟಣ | ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:21 IST
Last Updated 8 ಫೆಬ್ರುವರಿ 2026, 3:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪ್ರಜಾವಾಣಿ ಚಿತ್ರ

ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ 66/11 ಕೆವಿ ಬಿ.ವಿ. ಹಳ್ಳಿ ಹಾಗೂ 66/11 ಕೆವಿ ಗುರುವಿನಪುರ ವಿದ್ಯುತ್ ಉಪಕೇಂದ್ರದ ಮಾರ್ಗದಲ್ಲಿ ತ್ರೈ ಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ADVERTISEMENT

ಹಾಗಾಗಿ ಬಿ.ವಿ. ಹಳ್ಳಿ, ವಿರುಪಾಕ್ಷಿಪುರ, ಮಂಗಾಡಹಳ್ಳಿ, ಸಿಂಗರಾಜಿಪುರ, ಕೋಡಂಬಳ್ಳಿ, ಶ್ಯಾನುಭೋಗನಹಳ್ಳಿ, ಮೆಣಸಿಗನಹಳ್ಳಿ, ಸೋಮೆಗೌಡನದೊಡ್ಡಿ, ಅರಳಾಳುಸಂದ್ರ, ವಿಠೇಲನಹಳ್ಳಿ, ಗೊಲ್ಲರದೊಡ್ಡಿ, ಜಗದಾಪುರ, ಜೆ. ಬ್ಯಾಡರಹಳ್ಳಿ, ಕಾರೇಕೊಪ್ಪ, ಮಾದೇಗೌಡನದೊಡ್ಡಿ, ಲಿಂಗೇಗೌಡನದೊಡ್ಡಿ, ಯಲಿಯೂರು, ಸಿದ್ದಾಪುರ, ಗುವಾಪುರ, ಕಲ್ಲಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫೆ. 9ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ನಾಡಿದ್ದು ವ್ಯತ್ಯಯ

66 ಕೆವಿ ಅಕ್ಕೂರು ಮೊಳೆ ವಿದ್ಯುತ್ ಉಪಕೇಂದ್ರದ ಮಾರ್ಗದಲ್ಲಿ ಫೆ. 10ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಅಕ್ಕೂರು ಮೊಳೆ, ಸಂತೆಮೊಗೇನಹಳ್ಳಿ, ಅಕ್ಕೂರು, ಗರಕಹಳ್ಳಿ, ಸುಳ್ಳೇರಿ, ಮಳೂರು ಪಟ್ಟಣ, ಚಕ್ಕೆರೆ, ಚಕ್ಕಲೂರು, ಕೃಷ್ಣಾಪುರ, ತೂಬಿನಕೆರೆ, ಎ.ವಿ.ಹಳ್ಳಿ, ಕೊಂಡಾಪುರ, ಸೋಗಾಲ, ಬಾಣಗಹಳ್ಳ, ಮಾದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ರಾಮನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.