ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಹರೂರು ಗ್ರಾಮದ ಹೊರವಲಯದಲ್ಲಿ ಮಂಗಳವಾರ ಮುಂಜಾನೆ ದೇವರ ಕೊಂಡ ಹಾಯುವಾಗ ಎಡವಿ ಬಿದ್ದು ಅರ್ಚಕ ನಂದೀಶ್ ಎಂಬುವರು ಗಾಯಗೊಂಡಿದ್ದಾರೆ.
ಹರೂರು, ಮೊಗೇನಹಳ್ಳಿ, ಮಂಕುಂದ ಗ್ರಾಮದ ಜನರು ಸೇರಿ ಬಸಪ್ಪ ದೇವರ ಕೊಂಡ ಕಾರ್ಯಕ್ರಮ ಆಯೋಜಿಸಿದ್ದರು. ಮಂಕುಂದ ಗ್ರಾಮದವರಾದ ನಂದೀಶ್ ಮೊದಲ ಬಾರಿಗೆ ಕೊಂಡ ಹಾಯಲು ಹೋಗಿದ್ದು, ಈ ವೇಳೆ ಜಾರಿ ಬಿದ್ದರು. ಗಾಯಾಳುವಿಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.