ADVERTISEMENT

ರುದ್ರಭೂಮಿ ನೆಲಸಮ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 14:31 IST
Last Updated 5 ಮಾರ್ಚ್ 2020, 14:31 IST
ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು
ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು   

ಬಿಡದಿ: ಗಾಣಿಗರ ರುದ್ರಭೂಮಿಯನ್ನು ಗುರುವಾರದ ಮುಂಜಾನೆ ಯಾವುದೇ ಮಾಹಿತಿ ಇಲ್ಲದೆ ಸುಮಾರು 200 ವರ್ಷಗಳ ಇತಿಹಾಸವುಳ್ಳ ರುದ್ರಭೂಮಿಯನ್ನು ಏಕಾಏಕಿ ನೆಲಸಮ ಮಾಡಿದ್ದಾರೆ.

ಇದರಿಂದ ಆಕ್ರೋಶಗೊಂಡ ಗಾಣಿಗರ ಸಮುದಾಯದವರು ಕಾಮಗಾರಿ ನಡೆಸಿದ ಜೆಸಿಬಿಯನ್ನು ಹೊರಹಾಕಿದ್ದಾರೆ.ಶಾಸಕ ಎ.ಮಂಜುನಾಥ್, ಬಿಡದಿ ಪುರಸಭೆ ಅಧಿಕಾರಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

ಜನರ ಅಹವಾಲು ಸ್ವೀಕರಿಸಿ ಈ ನೆಲಸಮ ಮಾಡಿದ ಅಧಿಕಾರಿಗಳು ಹಾಗೂ ಜೆಸಿಬಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಸುಮಾರು 20 ಗುಂಟೆಯ ಜಮೀನು ಕಂದಾಯ ಅಧಿಕಾರಿಗಳ ಮಾಹಿತಿಯಲ್ಲಿ ಈ ಪ್ರದೇಶ ಹೈಟೆಕ್ ಬಸ್ ನಿಲ್ದಾಣ ಬಿಡದಿ ಎಂದು ನಮೂದಿಸಲಾಗಿದೆ ಎಂದು ಹೇಳಿರುತ್ತಾರೆ. ಕೂಡಲೇ ನಮ್ಮ ರುದ್ರಭೂಮಿಯನ್ನು ಹಿಂತಿರುಗಿಸಬೇಕು ಎಂದು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರು.

ADVERTISEMENT

ಪುರಸಭೆ ಸದಸ್ಯರಾದ ದೇವರಾಜ್, ರಾಜು, ರಾಮನಹಳ್ಳಿ ರಮೇಶ್, ಮುಖಂಡರು ಆನಂದ್, ನಾಗೇಂದ್ರ, ಮಂಜುನಾಥ್, ಮುಂತಾದವರುಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.