ADVERTISEMENT

‘ಶಕ್ತಿಗೆ ಅನುಗುಣವಾಗಿ ದಾನ ಮಾಡಿ’

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 13:25 IST
Last Updated 12 ಆಗಸ್ಟ್ 2019, 13:25 IST
ಕನಕಪುರ ತಾಲ್ಲೂಕಿನ ಹೂಕುಂದ ಗ್ರಾಮದಲ್ಲಿ ಮುಸ್ಲಿಮರು ಪ್ರಾರ್ಥನೆಗೆ ತೆರಳಿದರು
ಕನಕಪುರ ತಾಲ್ಲೂಕಿನ ಹೂಕುಂದ ಗ್ರಾಮದಲ್ಲಿ ಮುಸ್ಲಿಮರು ಪ್ರಾರ್ಥನೆಗೆ ತೆರಳಿದರು   

ಕನಕಪುರ: ತ್ಯಾಗ ಮತ್ತು ಬಲಿದಾನಕ್ಕೆ ಹೆಸರಾದ ಬಕ್ರೀದ್‌ನಲ್ಲಿ ಶಕ್ತಿಗೆ ಅನುಗುಣವಾಗಿ ದಾನ ಮಾಡಬೇಕು. ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಸಂತೋಷವಾಗಿ ಬಾಳಬೇಕಾಗಿದೆ ಎಂದು ಮುಖಂಡ ಇಕ್ಬಾಲ್‌ ಹುಸೇನ್‌ ಹೇಳಿದರು.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಹೂಕುಂದ ಗ್ರಾಮದಲ್ಲಿ ನಡೆದ ಬಕ್ರೀದ್‌ ಹಬ್ಬದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.

ಈ ಹಬ್ಬದಲ್ಲಿ ವಿಶೇಷವಾಗಿ ಟಗರು ಬಲಿಕೊಟ್ಟು ಅದರ ಮಾಂಸ ಮೂರು ಭಾಗವಾಗಿ ಒಂದು ಭಾಗ ಸ್ವಂತಕ್ಕೆ, ಒಂದು ಭಾಗ ಸಂಬಂಧಿಕರಿಗೆ, ಮತ್ತೊಂದು ಭಾಗ ಸಮಾಜದಲ್ಲಿನ ಬಡವರಿಗೆ ನೀಡಬೇಕೆಂದು ತಿಳಿಸಿದರು.

ADVERTISEMENT

ಹೂಕುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಮೀರ್‌ ಅಹಮ್ಮದ್‌ ಮಾತನಾಡಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿಯಾದ ಮಳೆಯಿಂದ ನೆರೆ ಉಂಟಾಗಿ ಸಾವಿರಾರು ಜನ ಸಂತ್ರಸ್ತರಾಗಿದ್ದಾರೆ ಎಂದು ಹೇಳಿದರು.

ಪಟೇಲ್‌ ಇಲಿಯಾಸ್‌ ಶರೀಪ್‌, ಉದ್ಯಮಿ ‍ಸರ್ದಾರ್‌ ಅಹಮ್ಮದ್‌, ಅಬ್ದುಲ್‌ಪಾಷ ಸೇರಿದಂತೆ ಸಮುದಾಯ ಮುಖಂಡರು ಇದ್ದರು. ಕೋಡಿಹಳ್ಳಿ ಪೊಲೀಸರು ಬಕ್ರೀದ್‌ ಆಚರಣೆಗೆ ಸೂಕ್ತ ಭದ್ರತೆ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.