ರಾಮನಗರ: ಮಾಗಡಿ ತಾಲ್ಲೂಕಿನ ಕುದೂರು ಲಕ್ಷ್ಮೀದೇವಿ ಅಗ್ನಿಕೊಂಡಹಾಯುವಾಗ ಉರುಳಿಬಿದ್ದು 8 ಜನ ಗಾಯಗೊಂಡರು.
ಸೋಮವಾರ ರಾತ್ರಿ10.30ರಲ್ಲಿ ಪೂಜಾರಿ ಕೊಂಡ ಹಾಯುವ ಮುನ್ನ ಅಗ್ನಿಕುಂಡದಲ್ಲಿ 56 ಜನ ಹರಕೆ ಹೊತ್ತ ಭಕ್ತರು ಕೊಂಡಕ್ಕೆ ಇಳಿದರು.
ರಮೇಶ್ ಎಂಬುವರು ಕೆಂಡದ ಮೇಲೆ ನಡೆಯುವಾಗ ಉರುಳಿಬಿದ್ದು ಗಂಭೀರವಾಗಿ ಗಾಯಗೊಂಡರು. ಉಳಿದವರಿಗೂ ಸಣ್ಣಪುಟ್ಟ ಗಾಯಗಳಾದವು.ರಮೇಶ್ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.