ADVERTISEMENT

ಗೌರಮ್ಮನ ಕೆರೆ ಅಭಿವೃದ್ಧಿಗೆ ಆದ್ಯತೆ : ಶಾಸಕ ಎ.ಮಂಜುನಾಥ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 13:57 IST
Last Updated 20 ಜನವರಿ 2020, 13:57 IST
ಗೌರಮ್ಮನಕೆರೆ ಅಭಿವೃದ್ಧಿಗೆ ಸೋಮವಾರ ಶಾಸಕ ಎ.ಮಂಜುನಾಥ ಭೂಮಿ ಪೂಜೆ ಸಲ್ಲಿಸಿದರು
ಗೌರಮ್ಮನಕೆರೆ ಅಭಿವೃದ್ಧಿಗೆ ಸೋಮವಾರ ಶಾಸಕ ಎ.ಮಂಜುನಾಥ ಭೂಮಿ ಪೂಜೆ ಸಲ್ಲಿಸಿದರು   

ಮಾಗಡಿ: ಚಾರಿತ್ರಿಕ ಗೌರಮ್ಮನ ಕೆರೆಯನ್ನು ಯೋಜನಾ ಪ್ರಾಧಿಕಾರ ಮತ್ತು ಸಣ್ಣನೀರಾವರಿ ಇಲಾಖೆ ಸಹಯೋಗದಲ್ಲಿ ₹2ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಸೋಮವಾರ ಗೌರಮ್ಮನಕೆರೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಕೆರೆಗೆ ಹರಿದು ಬರುತ್ತಿರುವ ಕಲುಷಿತ ತಡೆಯಲು ಚರಂಡಿ ನಿರ್ಮಿಸಲಾಗುತ್ತಿದೆ. ಕೆರೆ ಏರಿ ಮೇಲೆ ವಾಯುವಿಹಾರಿಗಳಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಲಾಗುವುದು ಎಂದರು. ‌

ಕೆರೆ ಅಕ್ರಮ ತಡೆಗಟ್ಟುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು. ಪುರಸಭೆ ಸದಸ್ಯರಾದ ಕೆ.ವಿ ಬಾಲು, ಜಯರಾಮು, ಅಶ್ವತ್ಥ, ಎಂ.ಎನ್.ಮಂಜುನಾಥ, ರಹಮತ್, ಅನಿಲ್‌ಕುಮಾರ್‌, ಭಾಗ್ಯಮ್ಮ ನಾರಾಯಣಪ್ಪ, ಹೇಮಲತಾ ನಾರಾಯಣ್, ನಾಗರತ್ನಮ್ಮ ರಾಜಣ್ಣ, ವಿಜಯಲಕ್ಷ್ಮಿ ರೂಪೇಶ್‌, ಪುರಸಭೆ ಮುಖ್ಯಾಧಿಕಾರಿ ಮಹೇಶ್, ಸಣ್ಣನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಸಹಾಯಕ ಎಂಜಿನಿಯರ್ ಜನಾರ್ದನ್, ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ರಾಮಣ್ಣ, ಕೆರೆಬೀದಿ ವಸಂತ ಕೃಷ್ಣ, ಗೌರಮ್ಮ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.