ADVERTISEMENT

ರಾಮನಗರ | 19 ಮಂದಿಗೆ ‘ಜಾನಪದ ಲೋಕ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:13 IST
Last Updated 5 ಫೆಬ್ರುವರಿ 2026, 4:13 IST
ಚಿಕ್ಕಣ್ಣ, ಗಣೆ ವಾದನ ಕಲಾವಿದ, ತುಮಕೂರು ಜಿಲ್ಲೆ
ಚಿಕ್ಕಣ್ಣ, ಗಣೆ ವಾದನ ಕಲಾವಿದ, ತುಮಕೂರು ಜಿಲ್ಲೆ   

ರಾಮನಗರ: ಕರ್ನಾಟಕ ಜಾನಪದ ಪರಿಷತ್ತು ಲೋಕೋತ್ಸವ ಪ್ರಯುಕ್ತ ಪ್ರತಿ ವರ್ಷ ನೀಡುವ ‘ಜಾನಪದ ಲೋಕ’ ಪ್ರಶಸ್ತಿಗೆ ಈ ಸಲ ಪರಿಷತ್ತಿನ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ. ಪ್ರೊ.ಹಿ. ಶಿ. ರಾಮಚಂದ್ರೇಗೌಡ ಸೇರಿದಂತೆ 19 ಮಂದಿ ಭಾಜನರಾಗಿದ್ದಾರೆ.

ಜಾನಪದ ಲೋಕದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ, ಪ್ರಶಸ್ತಿ ₹10 ಸಾವಿರದಿಂದ ₹25 ಸಾವಿರದವರೆಗೆ ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಹೇಳಿದರು.

ತುಮಕೂರು ಜಿಲ್ಲೆಯ ಗಣೆ ವಾದನ ಕಲಾವಿದ ಚಿಕ್ಕಣ್ಣ ಅವರಿಗೆ ನಾಡೋಜ ಡಾ. ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ ಘೋಷಿಸಲಾಗಿದೆ. 

ADVERTISEMENT

ಈ ಸಲ ಫೆ. 7 ಮತ್ತು 8ರಂದು ಜಾನಪದ ಲೋಕದಲ್ಲಿ ವಿದ್ಯಾರ್ಥಿ ಜಾನಪದ ಲೋಕೋತ್ಸವ–2026 ಕಾರ್ಯಕ್ರಮ ನಡೆಯಲಿದೆ. 8ರಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಡಾ. ಸಿರಿಗಂಧ ವಿ. ಶ್ರೀನಿವಾಸಮೂರ್ತಿ ಛಾಯಾಗ್ರಾಹಕ ಮತ್ತು ಜಾನಪದ ತಜ್ಞ ಬೆಂಗಳೂರು ನಗರ ಜಿಲ್ಲೆ
ಶಿವಮಾದಯ್ಯ ಪೂಜಾ ಕುಣಿತ ಕಲಾವಿದ ಬೆಂಗಳೂರು ದಕ್ಷಿಣ ಜಿಲ್ಲೆ
ಬೈರಪ್ಪ (ಗಂಗಣ್ಣ) ಮೂಡಲಪಾಯ ಯಕ್ಷಗಾನ ಕಲಾವಿದ ಬೆಂಗಳೂರು ದಕ್ಷಿಣ ಜಿಲ್ಲೆ
ಹೂಲಿ ಶೇಖರ್ ‘ಸ್ವಾತಂತ್ರ್ಯದ ಕಿಡಿಗಳು’ ಕೃತಿ ಲೇಖಕ ಬೆಂಗಳೂರು ನಗರ ಜಿಲ್ಲೆ
ಚಿನ್ನಮ್ಮ ಜೋಗುಳಪದ ಹಾಡುಗಾರ್ತಿ ಚಾಮರಾಜನಗರ ಜಿಲ್ಲೆ
ಕೆ.ಪಿ. ದೇವರಾಜು ಪೂಜಾ ಕುಣಿತ ಕಲಾವಿದ ಮಂಡ್ಯ ಜಿಲ್ಲೆ
ನಾರಾಯಣಪ್ಪ ಮಾಡಶಿರಾವಾರ ತತ್ವಪದ ಕಲಾವಿದ ರಾಯಚೂರು ಜಿಲ್ಲೆ
ಎಂ. ತಂಬೂರಿ ಸಿದ್ದರಾಜು ತಂಬೂರಿ ಕಲಾವಿದ ಬೆಂಗಳೂರು ನಗರ ಜಿಲ್ಲೆ
ಮುತ್ತಪ್ಪ ಬಸವಂತಪ್ಪ ದಾತನಾಳ ಸಾಹಸ ಕಲಾವಿದ ಧಾರವಾಡ ಜಿಲ್ಲೆ
ಚನಿಯಪ್ಪ ನಾಯ್ಕ ಯಕ್ಷಗಾನ ವೇಷಧಾರಿ ಕಲಾವಿದ ಕಾಸರಗೋಡು ಕೇರಳ
ಶಾರದಮ್ಮ ಸೋಬಾನೆ ಹಾಡುಗಾರ್ತಿ ಚಿಕ್ಕಮಗಳೂರು ಜಿಲ್ಲೆ
ಭಾರತಿ ಬಾಯಿ ಲಂಬಾಣಿ ನೃತ್ಯ ಕಲಾವಿದೆ ಬೀದರ್ ಜಿಲ್ಲೆ
ಬಿ.ಎಸ್. ಗೌಡ ಯಕ್ಷಗಾನ ಕಲಾವಿದ ಉತ್ತರ ಕನ್ನಡ ಜಿಲ್ಲೆ
ಡಾ. ಎಸ್. ರತ್ನಮ್ಮ ಸೋಲಿಗ ಕಲಾವಿದೆ ಚಾಮರಾಜನಗರ ಜಿಲ್ಲೆ
ಗಂಗಪ್ಪ ಮಹಾಲಿಂಗಪ್ಪ ಕರಡಿ ಕರಡಿ ಮಜಲು ಕಲಾವಿದ ಬಾಗಲಕೋಟೆ ಜಿಲ್ಲೆ
ಎಂ. ಬಸವರಾಜು ಗೊರವ ಕುಣಿತ ಕಲಾವಿದ ಬೆಂಗಳೂರು ಉತ್ತರ ಜಿಲ್ಲೆ

ಜಾನಪದ ಲೋಕ ದತ್ತಿ ಪ್ರಶಸ್ತಿ ನಾಡೋಜ ಡಾ. ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ: ಗಣೆ ವಾದನ ಕಲಾವಿದ ಚಿಕ್ಕಣ್ಣ ತುಮಕೂರು ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.