ADVERTISEMENT

ರಾಮನಗರ | ಕೆಯುಡಬ್ಲ್ಯೂಜೆ ಚುನಾವಣೆ: ಕಣದಲ್ಲಿ 37 ಸ್ಪರ್ಧಿಗಳು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 2:19 IST
Last Updated 1 ನವೆಂಬರ್ 2025, 2:19 IST
   

ರಾಮನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾ ಘಟಕದ 2025-28ನೇ ಸಾಲಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಗುರುವಾರ ಅಂತಿಮ ದಿನವಾಗಿತ್ತು. ಖಜಾಂಚಿ ಸ್ಥಾನಕ್ಕೆ ಅರುಣ್ ಅವರು ಅವಿರೋಧ ಆಯ್ಕೆಯಾಗಿದ್ದು, ಉಳಿದಂತೆ ಅಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳಿಗೆ 37 ಮಂದಿ ಕಣದಲ್ಲಿ ಉಳಿದಿದ್ದಾರೆ.

ಅಧ್ಯಕ್ಷ ಸ್ಥಾನದಲ್ಲಿ 2, ಉಪಾಧ್ಯಕ್ಷ 5, ಪ್ರಧಾನ ಕಾರ್ಯದರ್ಶಿ 5, ಕಾರ್ಯದರ್ಶಿ 4, ಜಿಲ್ಲಾ ಕಾರ್ಯಕಾರಿಣಿಗೆ 21 ಹಾಗೂ ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ 3 ಮಂದಿ ಸ್ಪರ್ಧಿಸಿದ್ದಾರೆ. ಅಧ್ಯಕ್ಷ ಸ್ಥಾನ ಪಿ.ಎಸ್. ರಾಜು, ಶಿವಲಿಂಗಯ್ಯ, ಉಪಾಧ್ಯಕ್ಷ (3 ಸ್ಥಾನ) ಸ್ಥಾನಕ್ಕೆ ಗಿರೀಶ್ ಕುಮಾರ್ ಕೆ.ಸಿ, ಶಿವಲಿಂಗಯ್ಯ, ಲಕ್ಷ್ಮೀಪತಿ, ಜಿ. ನರಸಿಂಹಯ್ಯ ಹಾಗೂ ಶಿವರಾಜು ಟಿ. ಕಣದಲ್ಲಿದ್ದಾರೆ.

ಪ್ರಧಾನ ಕಾರ್ಯದರ್ಶಿ (1 ಸ್ಥಾನ) ಅಫ್ರೋಜ್ ಖಾನ್ ಎಂ., ಮಂಜುನಾಥ್ ಎಸ್., ಕಾರ್ಯದರ್ಶಿ (3 ಸ್ಥಾನ) ಸ್ಥಾನಕ್ಕೆ ಎಂ.ಎಸ್. ಸಿದ್ದಲಿಂಗೇಶ್ವರ, ಎಂ. ಜಗದೀಶ್, ಕೇಶವಮೂರ್ತಿ ಸಿ., ಸುಧಾರಾಣಿ ಪಿ., ಜಿಲ್ಲಾ ಕಾರ್ಯಕಾರಣಿ (15 ಸ್ಥಾನ) ಸ್ಥಾನಕ್ಕೆ ಎಸ್. ರುದ್ರೇಶ್ವರ, ಗಜಫರ್ ಆಲಿ ಬೇಗ್, ಬಿ. ಮಹದೇವ್, ಸೋಮಶೇಖರ, ನರಸಿಂಗರಾವ್ ಕೆ., ಜಗದೀಶ್ ಎಸ್., ಎಸ್.ವಿ. ಗಿರೀಶ್, ಎ.ಬಿ. ಕುಮಾರ್, ವಿ. ರವಿಕಿರಣ್, ಶ್ರೀನಿವಾಸ್ ಜಿ.ಆರ್., ಕೃಷ್ಣಮೂರ್ತಿ, ಸಿ.ಎನ್. ವೆಂಕಟೇಶ್, ರಮೇಶ್ ಆರ್., ರಮೇಶ್ ಎಚ್.ಎಂ., ವೆಂಕಟೇಗೌಡ, ಶ್ರೀಧರ ಎಸ್., ಗಿರೀಶ್ ಸಿ.ಜಿ, ಬೋರಯ್ಯ ಜೆ.ಸಿ, ಅನಿಲ್ ಎಸ್, ಡಿ.ಟಿ. ತಿಲಕ್‌ ರಾಜ್ ಹಾಗೂ ಬಿ.ಟಿ. ಉಮೇಶ್ ಕಣದಲ್ಲಿ ಉಳಿದಿದ್ದಾರೆ.

ADVERTISEMENT

ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ಒಬ್ಬರು ಆಯ್ಕೆಯಾಗಲು ಅವಕಾಶವಿದೆ. ಅದಕ್ಕೆಕೆ ಚಲವರಾಜು, ಎಂ. ಶಿವಮಾದಯ್ಯ ಹಾಗೂ ಸಿದ್ದಲಿಂಗೇಗೌಡ (ಮಧು) ಸ್ಪರ್ಧಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿ. ಶಿವಣ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.