ADVERTISEMENT

ವ್ಯಕ್ತಿಯ ಜೀವಂತ ದಹನ: ಸಾಲ ಪಡೆದವರಿಂದ ಕೃತ್ಯ ಶಂಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 20:24 IST
Last Updated 6 ಮಾರ್ಚ್ 2020, 20:24 IST
   

ಕನಕಪುರ: ವ್ಯಕ್ತಿಯೊಬ್ಬನಿಗೆ ಜೀವಂತವಾಗಿ ಬೆಂಕಿ ಹಚ್ಚಿ ಕೊಲೆ ಮಾಡಿರುವುದು ಕಸಬಾ ಹೋಬಳಿ ಕೂನೂರು ಗ್ರಾಮದ ಬಳಿ ಗುರುವಾರ ರಾತ್ರಿ ನಡೆದಿದೆ.

ಮೃತರನ್ನು ಕೂನೂರು ಗ್ರಾಮದ ದಿವಂಗತ ವೀರಭದ್ರಯ್ಯ ಅವರ ಮಗ ಕುಮಾರಸ್ವಾಮಿ (52) ಎಂದು ಗುರುತಿಸಲಾಗಿದೆ. ಇವರು ಸುಮಾರು 20 ವರ್ಷಗಳ ಹಿಂದೆ ಬೆಂಗಳೂರಿಗೆ ತೆರಳಿ ಅಲ್ಲಿ ರೇಷ್ಮೆ ವ್ಯಾಪಾರ ಮಾಡಿಕೊಂಡು ಯಲಹಂಕದಲ್ಲಿ ನೆಲೆಸಿದ್ದರು.

ಇವರಿಗೆ ಪತ್ನಿ ವೀಣಾ ಮತ್ತು ಮಗಳು ಶ್ರೇಯ ಇದ್ದಾರೆ.

ADVERTISEMENT

‘ಗುರುವಾರ ಬೆಳಿಗ್ಗೆ ತನಗೆ ಯಾರೋ ಹಣ ಕೊಡಬೇಕಿದ್ದು, ಅವರಿಂದ ಹಣವನ್ನು ಪಡೆದು ಬರುವುದಾಗಿ ಮನೆ ಯಿಂದ ಹೊರಟವರು ಗುರುವಾರ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಮಗಳು ಶ್ರೇಯಾಗೆ ದೂರವಾಣಿ ಕರೆ ಮಾಡಿ ನನಗೆ ಜೀವಂತವಾಗಿ ಬೆಂಕಿ ಹಚ್ಚಿದ್ದಾರೆ’ ಎಂದು ಹೇಳಿದ್ದಾಗಿ ಪತ್ನಿ ತಿಳಿಸಿದರು.

‘ಕೂಡಲೆ ಮಗಳು ಕುಮಾರಸ್ವಾಮಿ ಸಹೋದರರು ಹಾಗೂ ತಾತನ ಮನೆಯ ವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅವರು ಘಟನಾ ಸ್ಥಳಕ್ಕೆ ಹೋಗಿ ಬೆಂಕಿಯಿಂದ ರಕ್ಷಣೆ ಮಾಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು ಶುಕ್ರವಾರ ಬೆಳಿಗ್ಗೆ ಮೃತಪಟ್ಟಿರುವುದಾಗಿ’ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.