ಮಾಗಡಿ: ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಬಿ.ಟಿ. ನಾಗೇಶ್ ಅವರನ್ನು ಬೆಂಬಲಿಸುವ ಮೂಲಕ ಜಿಲ್ಲೆಯಲ್ಲಿ ಕನ್ನಡದ ಕೆಲಸ ನಡೆಸಲು ಬೆಂಬಲಿಸೋಣ’ ಎಂದು ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಾಡಬಾಳ್ ವೆಂಕಟೇಶ್ ಮನವಿ ಮಾಡಿದರು.
ಪಟ್ಟಣದಲ್ಲಿ ಭಾನುವಾರ ನಾಗೇಶ್ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.
ವಿದ್ಯಾರ್ಥಿದಿಸೆಯಿಂದಲೂ ಅವರು ಕನ್ನಡ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡು, ನುಡಿ, ಜಲದ ಸಮಸ್ಯೆಗಳನ್ನು ನಿಖರವಾಗಿ ಚರ್ಚಿಸುವ, ಬಗೆಹರಿಸುವ ಸಂಘಟನಾ ಚತುರರಾಗಿದ್ದಾರೆ. ಜಿಲ್ಲೆಯ ಕಸಾಪ ಸದಸ್ಯರು ಈ ಬಾರಿ ಅವರನ್ನು ಬೆಂಬಲಿಸಬೇಕು ಎಂದು ಮನವಿ
ಮಾಡಿದರು.
ಸಂಗೀತಗಾರ ಚೌ.ಪು. ಸ್ವಾಮಿ, ಬರಹಗಾರ ಎಂ.ಕೆ. ಶಿವಲಿಂಗಯ್ಯ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಗೌರವಾಧ್ಯಕ್ಷ ಗಂಗಮಾರಯ್ಯ, ಪುಟ್ಟಸ್ವಾಮಿ ಚಕ್ಕೆರೆ, ರಾಜು, ನಾಗರತ್ನಾ, ನಾಗವೀಣಾ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರಾಜಶೇಖರ್ ಮನೆ ಮನೆಗೆ ತೆರಳಿ ಮತಯಾಚಿಸಿದರು. ಅಭ್ಯರ್ಥಿ ಬಿ.ಟಿ. ನಾಗೇಶ್
ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.