ಚನ್ನಪಟ್ಟಣ: ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಬೆಂಗಳೂರು ವಿಜಯನಗರ ಕ್ಷೇತ್ರದ ಶಾಸಕ ಕೃಷ್ಣಪ್ಪ, ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ₹34 ಲಕ್ಷ ವೆಚ್ಚದಲ್ಲಿ ನೂತನ ರಥವನ್ನು ಸಮರ್ಪಣೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ಪ್ರಿಯಕೃಷ್ಣ ಬೆಂಗಳೂರಿನ ತಮ್ಮ ನಿವಾಸದಲ್ಲಿ ದೇವಸ್ಥಾನದ ಮೇಲುಸ್ತುವಾರಿ ಸಮಿತಿಗೆ ₹20 ಲಕ್ಷದ ಚೆಕ್ ವಿತರಿಸಿದರು.
ಈ ಹಿಂದೆ ನೂತನ ರಥಕ್ಕೆ ಮೊದಲ ಕಂತು ₹14 ಲಕ್ಷದ ಚೆಕ್ ನೀಡಿದ್ದರು. ಈಗ ರಥದ ಕೆಲಸ ಮುಕ್ತಾಯ ಹಂತದಲ್ಲಿದ್ದು, ಉಳಿದ ₹20 ಲಕ್ಷದ ಚೆಕ್ ನೀಡಿದರು.
ದೇವಸ್ಥಾನದ ಅರ್ಚಕರಾದ ಶರತ್ ಕುಮಾರ್, ರವೀಂದ್ರ ಕುಮಾರ್, ಅನಿಲ್ ಹಾಗೂ ದೇವಸ್ಥಾನ ಉಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ವಿ.ಬಿ.ಚಂದ್ರು, ಪದಾಧಿಕಾರಿಗಳು ಚೆಕ್ ಅನ್ನು ಸ್ವೀಕರಿಸಿದರು. ಬೆಂಗಳೂರು ನಗರದ ಮುಖಂಡರಾದ ರವಿರಾಜ್, ಅಕ್ಷಯ್, ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.