ADVERTISEMENT

ಮಾಗಡಿ: ಲ್ಯಾಂಡ್ ಲಾರ್ಡ್ ಚಲನಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:34 IST
Last Updated 6 ಫೆಬ್ರುವರಿ 2026, 6:34 IST
ಮಾಗಡಿ ಬಾಲಾಜಿ ಚಿತ್ರ ಮಂದಿರದಲ್ಲಿ ಲ್ಯಾಂಡ್ ಲಾರ್ಡ್ ಚಿತ್ರವನ್ನು ಮುಖಂಡ ನಂಜಯ್ಯ ಉಚಿತ ಪ್ರದರ್ಶನ ಏರ್ಪಡಿಸಿದ್ದರು
ಮಾಗಡಿ ಬಾಲಾಜಿ ಚಿತ್ರ ಮಂದಿರದಲ್ಲಿ ಲ್ಯಾಂಡ್ ಲಾರ್ಡ್ ಚಿತ್ರವನ್ನು ಮುಖಂಡ ನಂಜಯ್ಯ ಉಚಿತ ಪ್ರದರ್ಶನ ಏರ್ಪಡಿಸಿದ್ದರು   

ಮಾಗಡಿ: ಪಟ್ಟಣದ ಬಾಲಾಜಿ ಚಿತ್ರಮಂದಿರದಲ್ಲಿ ಗುತ್ತಿಗೆದಾರ ಹಾಗೂ ಭೋವಿ ಸಮಾಜದ ಹಿರಿಯ ಮುಖಂಡ ನಂಜಯ್ಯ ಬುಧವಾರ 'ಲ್ಯಾಂಡ್ ಲಾರ್ಡ್' ಚಿತ್ರದ ಉಚಿತ ಪ್ರದರ್ಶನ ಆಯೋಜಿಸಿದ್ದರು.

ಸಂವಿಧಾನದ ಆಶಯ ಹೊಂದಿರುವ 'ಲ್ಯಾಂಡ್ ಲಾರ್ಡ್' ಚಿತ್ರ ಶತದಿನೋತ್ಸವ ಆಚರಿಸಬೇಕು ಎಂದು ನಂಜಯ್ಯ ಹೇಳಿದರು. ನಟ ದುನಿಯಾ ವಿಜಯ್ ಉತ್ತಮ ಸಂದೇಶ ನೀಡುವ ಚಿತ್ರ ನೀಡಿದ್ದಾರೆ. ಮೇಲು-ಕೀಳು ಎಂಬ ಭಾವನೆ ಇರುವ ಸನ್ನಿವೇಶ ಚಿತ್ರದಲ್ಲಿ ಒಳಗೊಂಡಿದೆ. ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಈ ಚಿತ್ರದ ಮೂಲಕ ಸಮಾಜಕ್ಕೆ ತಿಳಿಸಲಾಗಿದೆ ಎಂದರು. 

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದುರಾಯನಹಳ್ಳಿ ಕೃಷ್ಣ ಮಾತನಾಡಿ, ಚಿತ್ರ ಶತದಿನ ಆಚರಿಸಬೇಕು. ಎಲ್ಲರೂ ಚಿತ್ರ ನೋಡಿ ಅದನ್ನು ಯಶಸ್ವಿಗೊಳಿಸಲು, ಈ ರೀತಿಯ ಉಚಿತ ಪ್ರದರ್ಶನ ಮೂಲಕ ಎಲ್ಲರಿಗೂ ಚಿತ್ರ ತಲುಪಿಸುವಂತೆ ಮುಖಂಡರು ಮಾಡಬೇಕು ಎಂದರು.

ADVERTISEMENT

ಮುಖಂಡರಾದ ದೊಡ್ಡಿ ಲಕ್ಷ್ಮಣ್, ಹೊಸಪೇಟೆ ಬಲರಾಮ್, ಬೆಳಗುಂಬ ವಿಶ್ವನಾಥ್, ಉಮೇಶ್, ಜೀವಿಕ ಗಂಗಹನುಮಯ್ಯ, ವನಜ, ದೊಡ್ಡಯ್ಯ ರಮೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮಾಗಡಿ : ಪಟ್ಟಣದ ಬಾಲಾಜಿ ಚಿತ್ರಮಂದಿರದಲ್ಲಿ ಗುತ್ತಿಗೆದಾರ ಹಾಗೂ ಭೋವಿ ಸಮಾಜದ ಹಿರಿಯ ಮುಖಂಡರಾದ ನಂಜಯ್ಯನವರು ಬುಧವಾರ ಸಂಜೆ 4:30 ರ ಲ್ಯಾಂಡ್ ಲಾರ್ಡ್ ಚಲನಚಿತ್ರ ಪ್ರದರ್ಶನವನ್ನು ಉಚಿತವಾಗಿ ಏರ್ಪಡಿಸಲಾಗಿತ್ತು.

ಸಂವಿಧಾನದ ಆಶಯ ಹೊಂದಿರುವ ಲ್ಯಾಂಡ್ ಲಾರ್ಡ್ ಚಲನಚಿತ್ರ ಶತ ದಿನೋತ್ಸವ ಆಚರಿಸಲಿ, ನಟ ದುನಿಯಾ ವಿಜಯ್ ರವರು ಉತ್ತಮ ಸಂದೇಶ ಕೊಡುವ ಚಿತ್ರವನ್ನು ನೀಡಿದ್ದು ಹಿಂದೆ ಮೇಲು ಕೀಳು ಎಂಬ ಭಾವನೆ ಇರುವ ಸನ್ನಿವೇಶ ಒಳಗೊಂಡ ಚಿತ್ರದ ಮೂಲಕ ಸಂವಿಧಾನ ಎಲ್ಲರಿಗೂ ಸಮಾನ ಎಂಬ ಅಂಶವನ್ನು ಚಿತ್ರದಲ್ಲಿ ತೋರಿಸಿದ್ದಾರೆ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಈ ಚಿತ್ರದ ಮೂಲ ಸಮಾಜಕ್ಕೆ ತಿಳಸಲಾಗಿದೆ ಉಚಿತವಾಗಿ ನಮ್ಮ ಮುಖಂಡರುಗಳಿಗೆ ಚಿತ್ರ ಪ್ರದರ್ಶನ ತೋರಿಸಿದ್ದು ದಾವಣಗೆರೆಯಲು ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಉಚಿತ ಪ್ರದರ್ಶನ ಮಾಡಲಾಗಿತ್ತು ನಟ ದುನಿಯಾ ವಿಜಯ ರವರನ್ನು ಮಾಗಡಿಗೆ ಕರೆಸಿ ಉತ್ತಮ ಚಿತ್ರ ನೀಡಿರುವುದಕ್ಕೆ ಸನ್ಮಾನಿಸಲಾಗುತ್ತದೆ ಎಂದು ನಂಜಯ್ಯ ತಿಳಿಸಿದರು.

ತಾ.ಪಂ. ಮಾಜಿ ಅಧ್ಯಕ್ಷ ಚಂದುರಾಯನಹಳ್ಳಿ ಕೃಷ್ಣ ಮಾತನಾಡಿ, ಮೇಲು-ಕೀಳು ಎಂಬ ಭಾವನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಟ ದುನಿಯಾ ವಿಜಯ್ ರವರು ಉತ್ತಮ ಚಿತ್ರವನ್ನು ನೀಡಿದ್ದು ಶತದಿನ ಆಚರಿಸಿ ಎಲ್ಲರೂ ಚಿತ್ರವನ್ನು ನೋಡಿ ಯಶಸ್ವಿಗೊಳಿಸಲು ಈ ರೀತಿ ಉಚಿತ ಪ್ರದರ್ಶನ ಮೂಲಕ ಎಲ್ಲರಿಗೂ ಚಿತ್ರ ತಲುಪುವಂತೆ ಮುಖಂಡರುಗಳು ಮಾಡಲಿ ಎಂದು ತಿಳಿಸಿದರು.

ಉಚಿತ ಚಲನಚಿತ್ರ ಪ್ರದರ್ಶನ ಹಿನ್ನೆಲೆಯಲ್ಲಿ ಬಂದಿದ್ದ ಪ್ರೇಕ್ಷಕರಿಗೆ ಉಚಿತ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಇದೇ ವೇಳೆ ಮುಖಂಡರಾದ ದೊಡ್ಡಿ ಲಕ್ಷ್ಮಣ್, ಹೊಸಪೇಟೆ ಬಲರಾಮ್, ಬೆಳಗುಂಬ ವಿಶ್ವನಾಥ್, ಉಮೇಶ್, ಜೀವಿಕ ಗಂಗಹನುಮಯ್ಯ, ವನಜ, ದೊಡ್ಡಯ್ಯ ರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.