ADVERTISEMENT

ರಾಮನಗರ: ಚಿರತೆ ದಾಳಿ, ಮಹಿಳೆಗೆ ಗಾಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 13:09 IST
Last Updated 4 ಅಕ್ಟೋಬರ್ 2021, 13:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಇಲ್ಲಿನ ಕಲ್ಯ‌ ಬೆಟ್ಟದ‌ ಬಳಿ‌ ಸೋಮವಾರ ಸಂಜೆ ಚಿರತೆಯೊಂದು ಕುರಿಗಾಹಿ‌ ಮಹಿಳೆ‌ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

ಕಾಡುಗೊಲ್ಲರ ಹಟ್ಟಿ‌ ನಿವಾಸಿ ಸಿದ್ದಗಂಗಮ್ಮ (38) ಗಾಯಗೊಂಡಿದ್ದು, ಮಾಗಡಿ ಸರ್ಕಾರಿ ಆಸ್ಪತ್ರೆ ಯಲ್ಲಿ‌ ಪ್ರಾಥಮಿಕ‌ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುರಿಗಳನ್ನು‌ ಮೇಯಿಸುತ್ತಿದ್ದ ಸಂದರ್ಭ ದಾಳಿ ನಡೆಸಿದ ಚಿರತೆಯು ಮಹಿಳೆಯ ಕುತ್ತಿಗೆಗೆ ಕಚ್ಚಿ ಗಾಯಗೊಳಿಸಿತು. ಬಳಿಕ ಕುರಿಯನ್ನು ಹೊತ್ತೊಯ್ದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.