ADVERTISEMENT

ಶೋಕಿಗಾಗಿ ಹಸು ಸಾಕಾಣಿಕೆ ರೈತರಿಗೆ ಮಾರಕ: ಎಚ್.ಎನ್.ಅಶೋಕ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:42 IST
Last Updated 7 ಫೆಬ್ರುವರಿ 2026, 4:42 IST
ಮಾಗಡಿ ತಾಲ್ಲೂಕಿನ ಬ್ಯಾಲಕೆರೆಯಲ್ಲಿ ಹಾಲು ಕರೆಯುವ ಸ್ಪರ್ಧೆಯಲ್ಲಿ‌ ವಿಜೇತರಾದ ರೈತರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು 
ಮಾಗಡಿ ತಾಲ್ಲೂಕಿನ ಬ್ಯಾಲಕೆರೆಯಲ್ಲಿ ಹಾಲು ಕರೆಯುವ ಸ್ಪರ್ಧೆಯಲ್ಲಿ‌ ವಿಜೇತರಾದ ರೈತರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು    

ಮಾಗಡಿ: ರೈತರನ್ನು ಹೈನುಗಾರಿಕೆಗೆ ಪ್ರೋತ್ಸಾಹಿಸುವ ಸಲುವಾಗಿ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬಮೂಲ್ ನಿರ್ದೆಶಕ ಎಚ್.ಎನ್.ಆಶೋಕ್ ಹೇಳಿದರು.

ತಾಲ್ಲೂಕಿನ ಬ್ಯಾಲಕೆರೆ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ, ಕರುಗಳ ಪ್ರದರ್ಶನ, ಶ್ವಾನ, ಪಶು ಆರೋಗ್ಯ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಲವರು ಶೋಕಿಗಾಗಿ ಹೆಚ್ಚು ಹಾಲು ಕೊಡುವ ಹಸುಗಳನ್ನು ಖರೀದಿಸಿ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವರ ಸಂಖ್ಯೆ ಹೆಚ್ಚಿದೆ. ಇದರಿಂದ ಅರ್ಹ ರೈತರಿಗೆ ತೊಂದರೆಯಾಗಿದೆ ಎಂದರು.

ADVERTISEMENT

ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ.ರೆ.ಮ.ನಾಗಭೂಷಣ್ ಮಾತನಾಡಿ, ಡಾ.ವರ್ಗಿಸ್ ಕುರಿಯನ್ ಅವರು ಹಾಲಿನ ಹೊಳೆ ಹರಿಸಿದರು. ಇದರಿಂದ ಮಿಶ್ರತಳಿಯ ಹಸುಗಳ ವ್ಯಾಪಕ ಸಾಕಾಣಿಕೆ ಹೆಚ್ಚಿತ್ತು. ನಿರಂತರ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಹೆಚ್ಚಾದರಿಂದ ರೈತರು ಹೈನುಗಾರಿಕೆಯಲ್ಲಿ ದೇಸಿ ತಳಿಗಳನ್ನು ಸಾಕುವುದಕ್ಕಿಂತ ಮಿಶ್ರ ತಳಿ ಹಸುಗಳನ್ನು ಸಾಕಿ ಹೆಚ್ಚಿನ ವರಮಾನ ಪಡೆಯಬಹುದು ಎಂದರು.

ರೈತರು ಪ್ರಗತಿಪರ ರೈತರ ಪ್ರಾತ್ಯಕ್ಷಿಕೆ, ಫಾರಂ, ಕೃಷಿ ಮೇಳಗಳಿಗೆ ಭೇಟಿ ನೀಡುವುದರಿಂದ ಹೈನುಗಾರಿಕೆಯಲ್ಲಿ ವಿಸ್ತಾರವಾದ ಜ್ಞಾನ ಪಡೆಯಬಹುದು. ಹೈನುಗಾರಿಕೆ ಮತ್ತು ಇತರ ಪಶುಸಂಗೋಪನಾ ಚಟುವಟಿಕೆಗಳಾದ ಕುರಿ, ಮೇಕೆ, ಹಂದಿ, ಕೋಳಿ ಅಥವಾ ಸಮಗ್ರ ಕೃಷಿ ಅಳವಡಿಸಿಕೊಂಡು ಆರ್ಥಿಕವಾಗಿ ಮುನ್ನಡೆ ಸಾಧಿಸಬಹುದು ಎಂದರು.

ಗ್ರಾ.ಪಂ.ಅಧ್ಯಕ್ಷೆ ತೇಜಸ್ವಿನಿ ಚಿಕ್ಕರಾಜು, ಮಾಗಡಿ ರೋಟರಿ ಸೆಂಟ್ರಲ್ ಅಧ್ಯಕ್ಷ ಡಾ.ಮಂಜುನಾಥ ಬೆಟಗೇರಿ ಮಾತನಾಡಿದರು.

ಪಶು ಆರೋಗ್ಯ ಶಿಬಿರ, ಶ್ವಾನ ಶಿಬಿರ ನಡೆಸಲಾಯಿತು. ಬೆಂಗಳೂರಿನ ಪ್ರಸುತಿ ಶಾಸ್ತ್ರ ತಜ್ಞ ಡಾ.ಲಕ್ಷ್ಮಿಕಾಂತ್ 50 ರಾಸುಗಳ ಬಂಜೆತನ ನಿವಾರಣೆಗೆ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದರು. ಮನು ಪೆಂಟ್ ಕ್ಲಿನಿಕ್ ಡಾ.ತನುಜಾ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಶ್ವಾನ ಶಿಬಿರ ನಡೆಸಿ 30 ಸಾಕು ನಾಯಿಗಳಿಗೆ ಉಚಿತವಾಗಿ ಚಿಕಿತ್ಸೆ ಮತ್ತು ರೇಬಿಸ್ ರೋಗದ ವಿರುದ್ಧ ಮುಂಜಾಗೃತ ಕ್ರಮವಾಗಿ ಲಸಿಕೆ ಹಾಕಿ ಅರಿವು ಮೂಡಿಸಿದರು.

ಕರುಗಳ ಪ್ರದರ್ಶನದಲ್ಲಿ 70 ವಿವಿಧ ತಳಿಗಳ ಕರುಗಳು ಭಾಗವಹಿಸಿದವು. 15 ಹಳ್ಳಿಕಾರ್‌ ತಳಿಯ ಕರುಗಳು ಭಾಗವಹಿಸಿದ್ದು ವಿಶೇಷ ಆಗಿತ್ತು.

ಬಹುಮಾನ: ಚಿಕ್ಕಕರು ವಿಭಾಗದಲ್ಲಿ ಸಾತನೂರು ಅರುಣ್ ಪ್ರಥಮ ಬಹುಮಾನ, ಮಧ್ಯಮ ವಯಸ್ಸಿನ ಕರುಗಳ ವಿಭಾಗದಲ್ಲಿ ಜ್ಯೋಗಿ ಪಾಳ್ಯ ದಿನೇಶ್, ದೊಡ್ಡ ಕರುಗಳಲ್ಲಿ ಸಿದ್ದಯ್ಯನ ಪಾಳ್ಯದ ಶಿವಕುಮಾರ್‌, ಹಳ್ಳಿಕಾರ್ ತಳಿ ವಿಭಾಗದಲ್ಲಿ ಬ್ಯಾಲಕೆರೆ ಶಿವಶಂಕರ್ ಪ್ರಥಮ ಬಹುಮಾನ ಪಡೆದರು. ಇವರಿಗೆ ಪ್ಯಾನ್ ವಿತರಿಸಲಾಯಿತು.

ಕರುಗಳ ಪ್ರದರ್ಶನದಲ್ಲಿ ಚಾಂಪಿಯನ್ ಬಹುಮಾನವನ್ನು ಹಾಲಸಿಂಗನಹಳ್ಳಿ ಬಸವೇಗೌಡ ಜೋಡಿಯ ನಾಟಿ ಹಳ್ಳಿಕಾರು ಹೆಣ್ಣು ಕರುಗಳಿಗೆ ಮಿಕ್ಸಿ ನೀಡಲಾಯಿತು.

ಹಾಲು ಕರೆಯುವ ಸ್ಪರ್ಧೆಯಲ್ಲಿ 32.2 ಕೆ.ಜಿ ಹಾಲು ನೀಡಿದ ಸಿದ್ದಯ್ಯನ ಪಾಳ್ಯದ ಶಿವರಾಜುಗೆ ಪ್ರಥಮ ಬಹುಮಾನವಾಗಿ ₹25ಸಾವಿರ ನಗದು, ಪಾರಿತೋಷಕ ಹಾಗೂ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

26.5 ಕೆ.ಜಿ ಹಾಲನ್ನು ನೀಡಿದ ಗುಡೇಪಾಳ್ಯದ ಹೊನ್ನಪ್ಪ ಅವರ ಹಸುವಿಗೆ ದ್ವಿತಿಯ ಬಹುಮಾನವಾಗಿ ₹15 ಸಾವಿರ ಪಾರಿತೋಷಕ ನೀಡಿ ಪ್ರಮಾಣ ಪತ್ರ ವಿತರಿಸಿ ಸನ್ಮಾನಿಸಲಾಯಿತು.

19.06 ಕೆಜಿ ಹಾಲು ನೀಡಿದ ಬ್ಯಾಲಕೆರೆ ಸರ್ವಮಂಗಳಮ್ಮ ಅವರ ಹಸುವಿಗೆ ತೃತಿಯ ಬಹುಮಾನವಾಗಿ ₹10 ಸಾವಿರ ನಗದು, ಪಾರಿತೋಷಕ, ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಹಾಲು ಕರೆಯುವ ಸ್ಪರ್ಧೆಯಲ್ಲಿ ಒಟ್ಟು 13 ಹಸುಗಳು ಭಾಗವಹಿಸಿದವು. ಉಳಿದ ಎಲ್ಲ ಹಸುಗಳ ಮಾಲೀಕರಿಗೆ ಸಮಾಧಾನಕ ಬಹುಮಾನ ನೀಡಲಾಯಿತು.

ಡೇರಿ ಅಧ್ಯಕ್ಷ ಹೊನ್ನಪ್ಪ, ಕಾರ್ಯದರ್ಶಿ ಶಿವಕುಮಾರು, ಗ್ರಾ.ಪಂ.ಉಪಾಧ್ಯಕ್ಷ ರಾಮಸಿಂಗ್, ಬಿಎಸ್.ಹರೀಶ್, ಬಮೂಲ್ ಉಪವ್ಯವಸ್ಥಾಪಕ ಡಾ.ಅಜಯ್ ಕುಮಾರು. ಮಹಂತೇಶ್, ಪ್ರಭಾಕರ್, ಡಾ.ಜಗದೀಶ್ ರೆಡ್ಡಿ, ಡಾ.ಜಯಶ್ರೀ, ಡಾ.ಚಂದನಾ, ಡಾ.ರಾಕೇಶ್, ಡಾ.ಹರೀಶ್, ಡಾ.ರಮ್ಯ, ಡಾ.ಸುಪ್ರಿಯ, ಡಾ.ಲೋಕೇಶ್, ಡಾ.ನರೇಶ್ ಬಾಬು, ಡಾ.ಸಚಿನ್ ಗೌಡ, ಡಾ.ಲೋಕೇಶ್, ಡಾ.ರೇಖಾ, ಡಾ.ಮಹಲಿಂಗಪ್ಪ ಕರಿಗಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಮಾಗಡಿ : ರೈತರನ್ನು ಹೈನುಗಾರಿಕೆಗೆ ಪ್ರೋತ್ಸಾಹಿಸುವ ಸಲುವಾಗಿ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬಮೂಲ್ ನಿರ್ದೆಶಕ ಎಚ್.ಎನ್.ಆಶೋಕ್ ಹೇಳಿದರು.

ತಾಲ್ಲೂಕಿನ ಬ್ಯಾಲಕೆರೆ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ, ಕರುಗಳ ಪ್ರದರ್ಶನ, ಶ್ವಾನ. ಪಶು ಆರೋಗ್ಯ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಶು ಇಲಾಖೆ, ಬಮೂಲ್ ಇಂಥಹ ರೈತ ಪರವಾದ ಕಾರ್ಯಕ್ರಮ ಆಯೋಜನೆ ಮಾಡಿರುವುದು ಪ್ರಯೋಜನಕಾರಿಯಾಗಿದೆ ಸಾಮಾನ್ಯ ರೈತರು ಸಹ ಹೆಚ್ಚು ಉತ್ಪಾದನೆ ಮಾಡುವ ಹಸುಗಳನ್ನು ನಿರ್ವಹಣೆ ಮಾಡಿ ಹೆಚ್ಚು, ಹೆಚ್ಚು ಹಾಲನ್ನು ಉತ್ಪಾದಿಸಿ ವರಮಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಜತೆಗೆ ರೈತರಲ್ಲಿ ಹಾಲು ಉತ್ಪಾದಕರಲ್ಲಿ ಜಾಗೃತಿ, ಅರಿವು ಮೂಡಿಸಬಹುದಾಗಿದೆ ಎಂದರು.

ಇತ್ತೀಚೆಗೆ ಕೆಲವರು ಶೋಕಿಗಾಗಿ ಹೆಚ್ಚು ಹಾಲು ಕೊಡುವ ಹಸುಗಳನ್ನು ಖರೀದಿಸಿ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವರ ಸಂಖ್ಯೆ ಹೆಚ್ಚಿದೆ ಇದರಿಂದ ಅರ್ಹ ರೈತರಿಗೆ ತೊಂದರೆಯಾಗಿದೆ ಇದನ್ನು ಅರಿತು ಸಮರ್ಪಕ ದಾಖಲೆ ಉಳ್ಳ ಹಸುಗಳನ್ನು ಈ ಸ್ಪರ್ದೆಯಲ್ಲಿ ಭಾಗವಹಿಸಿ ಹೆಚ್ಚು ಹಾಲು ಕರೆಯುವ ಹಸುಗಳ ಮಾಲೀಕರಿಗೆ ಪ್ರಶಸ್ತಿ. ನಗದು, ಪ್ರಮಾಣ ಪತ್ರ ನೀಡಿ ಸನ್ಮಾನಿಸಿರುವುದು ಸಂತಸತಂದಿದೆ ಎಂದರು.

ಪಶು ಸಂಗೋಪನಾ ಸಹಾಯಕ ನಿರ್ದೆಶಕ ಡಾ. ರೆ.ಮ. ನಾಗಭೂಷಣ್ ಮಾತನಾಡಿ, ಡಾ. ವರ್ಗಿಸ್ ಕುರಿಯನ್ ಅವರು ಹಾಲಿನ ಹೊಳೆ ಹರಿಸಿದರು ಇದರಿಂದ ಮಿಶ್ರತಳಿಯ ಹಸುಗಳ ವ್ಯಾಪಕ ಸಾಕಾಣಿಕೆ ಹೆಚ್ಚಿತ್ತು ನಿರಂತರ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಹೆಚ್ಚಾದರಿಂದ ರೈತರು ಹೈನುಗಾರಿಕೆಯಲ್ಲಿ ದೇಶಿಯ ತಳಿಗಳನ್ನು ಸಾಕುವುದಕ್ಕಿಂತ ಮಿಶ್ರ ತಳಿ ಹಸುಗಳನ್ನು ಸಾಕಿ ಹೆಚ್ಚಿನ ವರಮಾನ ಪಡೆಯಬಹುದು ಎಂಬ ಅನುಭವಕ್ಕೆ ಬಂದಿದ್ದರಿಂದ ಇಂದು ಮಿಶ್ರ ತಳಿಗಳ ಸಾಕಾಣಿಕೆ ಹೆಚ್ಚಾಗಿದೆ. ರೈತರು ಪ್ರಗತಿಪರ ರೈತರ ಮನೆಗಳಿಗೆ ಪ್ರಾತ್ಯಾಕ್ಷಿಕೆಗಳಿಗೆ, ಪಾರಂಗಳಿಗೆ, ಕೃಷಿ ಮೇಳಗಳಿಗೆ ಬೇಟಿ ನೀಡುವುದರಿಂದ ಹೈನುಗಾರಿಕೆಯಲ್ಲಿ ವಿಸ್ತಾರವಾದ ಜ್ಞಾನವನ್ನು ಪಡೆದುಕೊಂಡು ವೈಜ್ಞಾನಿಕ ಪದ್ದತಿಯಲ್ಲಿ ಹೈನುಗಾರಿಕೆ ಮತ್ತು ಇತರೆ ಪಶುಸಂಗೋಪನಾ ಚಟುವಟಿಕೆಗಳಾದ ಕುರಿ, ಮೇಕೆ, ಹಂದಿ, ಕೋಳಿ ಅಥವ ಸಮಗ್ರ ಕೃಷಿ ಅಳವಡಿಸಿಕೊಂಡು ಆರ್ಥಿಕವಾಗಿ ಮುನ್ನಡೆ ಸಾಧಿಸಬಹುದು ಎಂದರು.

ಗ್ರಾ.ಪಂ. ಅಧ್ಯಕ್ಷೆ ತೇಜಸ್ವಿನಿ ಚಿಕ್ಕರಾಜು, ಮಾಗಡಿ ರೋಟರಿ ಸೆಂಟ್ರಲ್ ಅಧ್ಯಕ್ಷ ಡಾ.ಮಂಜುನಾಥ ಬೆಟಗೇರಿ ಮಾತನಾಡಿದರು,

ಪಶು ಆರೋಗ್ಯ ಶಿಬಿರ, ಶ್ವಾನ ಶಿಬಿರ ನಡೆಸಲಾಯಿತು. ಬೆಂಗಳೂರಿನ ಪ್ರಸುತಿ ಶಾಸ್ತ್ರ ತಜ್ಞ ಡಾ.ಲಕ್ಷ್ಮಿ ಕಾಂತ್ ಅವರು ಸುಮಾರು 50 ರಾಸುಗಳ ಬಂಜೆತನ ನಿವಾರಣೆಗೆ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದರು. ಮನು ಪೆಂಟ್ ಕ್ಲಿನಿಕ್ ಡಾ.ತನುಜಾ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಶ್ವಾನ ಶಿಬಿರ ನಡೆಸಿ 30 ಸಾಕು ನಾಯಿಗಳಿಗೆ ಉಚಿತವಾಗಿ ಚಿಕಿತ್ಸೆ ಮತ್ತು ರೇಬಿಸ್ ರೋಗದ ವಿರುದ್ದ ಮುಂಜಾಗೃತ ಕ್ರಮವಾಗಿ ಲಸಿಕೆ ಹಾಕಿ ಅರಿವು ಮೂಡಿಸಿದರು.

ಕರುಗಳ ಪ್ರದರ್ಶನದಲ್ಲಿ 70 ವಿವಿಧ ತಳಿಗಳ ಕರುಗಳು ಭಾಗವಹಿಸಿದವು, 15 ಹಳ್ಳಿಕಾರು ತಳಿಯ ಕರುಗಳು ಭಾಗವಹಿಸಿದ್ದು ವಿಶೇಷತೆಯಾಗಿತ್ತು.

ಬಹುಮಾನ : ಚಿಕ್ಕಕರುಗಳ ವಿಭಾಗದಲ್ಲಿ ಪ್ರಥಮ ಬಹುಮಾನ ಸಾತನೂರು ಅರುಣ್, ಮದ್ಯಮ ವಯಸ್ಸಿನ ಕರುಗಳ ವಿಭಾಗದಲ್ಲಿ ಜ್ಯೋಗಿ ಪಾಳ್ಯ ದಿನೇಶ್, ದೊಡ್ಡ ಭಾಗವಹಿಸಿದ್ದಕರುಗಳಲ್ಲಿ ಸಿದ್ದಯ್ಯನ ಪಾಳ್ಯದ ಶಿವಕುಮಾರು. ಹಳ್ಳಿ ಕಾರ್ ತಳಿ ವಿಭಾಗದಲ್ಲಿ ಬ್ಯಾಲಕೆರೆ ಶಿವಶಂಕರ್ ಪ್ರಥಮ ಬಹುಮಾನ ಪಡೆದರು. ಇವರಿಗೆ ಪ್ಯಾನ್ ವಿತರಿಸಲಾಯಿತು.

ಕರುಗಳ ಪ್ರದರ್ಶನದಲ್ಲಿ ಚಾಂಪಿಯನ್ ಬಹುಮಾನವನ್ನು ಹಾಲಸಿಂಗನಹಳ್ಳಿ ಬಸವೇಗೌಡ ಅವರು ಜೋಡಿ ನಾಟಿ ಹಳ್ಳಿಕಾರುನ ಹೆಣ್ಣು ಕರುಗಳಿಗೆ ಮಿಕ್ಸಿ ನೀಡಲಾಯಿತು.

ಹಾಲು ಕರೆಯುವ ಸ್ಪರ್ಧೆಯಲ್ಲಿ 32.2 ಕೆಜಿ ಹಾಲನ್ನು ನೀಡಿದ ಸಿದ್ದಯ್ಯನ ಪಾಳ್ಯದ ಶಿವರಾಜುಗೆ ಪ್ರಥಮ ಬಹುಮಾನವಾಗಿ 25 ಸಾವಿರ ನಗದು, ಪಾರಿತೋಶಕ ಹಾಗೂ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

26.5 ಕೆಜಿ ಹಾಲನ್ನು ನೀಡಿದ ಗುಡೇಪಾಳ್ಯದ ಹೊನ್ನಪ್ಪ ಅವರ ಹಸುವಿಗೆ ದ್ವಿತಿಯ ಬಹುಮಾನವಾಗಿ 15 ಸಾವಿರ ರೂ ನಗದು, ಪಾರಿತೇಶಕ ನೀಡಿ ಪ್ರಮಾಣ ಪತ್ರ ವಿತರಿಸಿ ಸನ್ಮಾನಿಸಲಾಯಿತು.

19.06 ಕೆಜಿ ಹಾಲನ್ನು ನೀಡಿದ ಬ್ಯಾಲಕೆರೆ ಸರ್ವಮಂಗ ಳಮ್ಮ ಅವರ ಹಸುವಿಗೆ ತೃತಿಯ ಬಹುಮಾನವಾಗಿ 10 ಸಾವಿರ ನಗದು, ಪಾರಿತೋಶಕ, ಪ್ರಮಾಣ ಪತ್ರ ನೀಡಿ ಸನ್ಮಾನಿಸ ಲಾಯಿತು. ಹಾಲು ಕರೆಯುವ ಸ್ಪರ್ಧೆಯಲ್ಲಿ ಒಟ್ಟು 13 ಹಸುಗಳು ಭಾಗವಹಿಸಿದವು ಉಳಿದ ಎಲ್ಲಾ ಹಸುಗಳ ಮಾಲೀಕರಿಗೆ ಸಮಾಧಾನಕ ಬಹುಮಾನ, ಪ್ರಮಾಣ ಪತ್ರ, 5 ಲೀಟರ್ ಲವಣ, ಕನಿಜ, ಮಿಶ್ರಣದ ಟಾನಿಕ್ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡೇರಿ ಅಧ್ಯಕ್ಷ ಹೊನ್ನಪ್ಪ, ಕಾರ್ಯದರ್ಶಿ ಶಿವಕುಮಾರು, ಗ್ರಾ.ಪಂ. ಉಪಾಧ್ಯಕ್ಷ ರಾಮಸಿಂಗ್, ಬಿಎಸ್.ಹರೀಶ್, ಬಮೂಲ್ ನ ಉಪವ್ಯವಸ್ಥಾಪಕ ಡಾ.ಅಜಯ್ ಕುಮಾರು. ಮಹಂತೇಶ್, ಪ್ರಭಾಕರ್, ಡಾ.ಜಗದೀಶ್ ರೆಡ್ಡಿ, ಡಾ.ಜಯಶ್ರೀ, ಡಾ.ಚಂದನಾ, ಡಾ.ರಾಕೇಶ್, ಡಾ.ಹರೀಶ್, ಡಾ.ರಮ್ಯ, ಡಾ.ಸುಪ್ರಿಯ, ಡಾ.ಲೋಕೇಶ್, ಡಾ.ನರೇಶ್ ಬಾಬು, ಡಾ.ಸಚಿನ್ ಗೌಡ, ಡಾ. ಲೋಕೇಶ್, ಡಾ.ರೇಖಾ, ಡಾ. ಮಹಲಿಂಗಪ್ಪ ಕರಿಗಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.