ADVERTISEMENT

ಕೋತಿ ಬೇಟೆ: ವಾಹನ ಬಿಟ್ಟು ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 5:13 IST
Last Updated 19 ಸೆಪ್ಟೆಂಬರ್ 2021, 5:13 IST

ರಾಮನಗರ: ಕೋತಿ ಬೇಟೆಯಾಡಿ ಅದನ್ನು ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ ಆರೋಪಿ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದು, ಆರೋಪಿ ವಾಹನ ಬಿಟ್ಟು
ಪರಾರಿಯಾಗಿದ್ದಾನೆ.

ಹಂದಿಗೊಂದಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ತುಂಬೇನಹಳ್ಳಿ ಗ್ರಾಮದ ಸಮೀಪ ಉಪ ವಲಯ ಅರಣ್ಯಾಧಿಕಾರಿ ಕೆ. ರಾಜು ಗುರುವಾರ ರಾತ್ರಿ ಗಸ್ತು ತಿರುಗುವಾಗ, ವ್ಯಕ್ತಿಯೊಬ್ಬ ಹುಣಸನಹಳ್ಳಿ-ತುಂಬೇನಹಳ್ಳಿ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಕೋತಿ ಕಳೇಬರ ಚೀಲದಲ್ಲಿ ಸುತ್ತಿಟ್ಟುಕೊಂಡು ಹೋಗುತ್ತಿರುವುದು ಕಂಡು ಬಂದಿತು.

ಅರಣ್ಯಾಧಿಕಾರಿ ಸುಮಾರು 3 ಕಿ.ಮೀ ದೂರ ಆರೋಪಿಯ ಬೆನ್ನಟ್ಟಿದ್ದು, ಆರೋಪಿಯು ಬೈಕ್ ಹಾಗೂ ಕೋತಿಯ ಕಳೇಬರವನ್ನು ರಸ್ತೆಯಲ್ಲೇ ಬಿಟ್ಟು ಪರಾರಿ ಆಗಿದ್ದಾನೆ.

ADVERTISEMENT

ಬೇಟೆಗೆ ಬಳಸಿದ್ದ ಬಲೆ, ಮಚ್ಚು, ಕೋತಿ ಕಳೇಬರ, ದ್ವಿಚಕ್ರವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವನ್ಯಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.